ಅಂಕೋಲಾ, ಜು.29: ಸಹೋದರನ ಪತ್ನಿ ಹಾಗೂ ಆಕೆಯ ಪುತ್ರನನ್ನು ಮಾಜಿ ಸೈನಿಕನೊಬ್ಬ ಗುಂಡಿಕ್ಕಿ ಕೊಂದಿದ್ದಾನೆ. ಅಂಕೋಲಾದಲ್ಲಿ ಈ ಘಟನೆ ನಡೆದಿದ್ದು, ಆಸ್ತಿ ಹಂಚಿಕೆ ಕುರಿತು ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.
ಆಸ್ತಿ ವಿವಾದವೇ ಈ ಕೊಲೆಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಭೂ ಸೇನೆ ನಿವೃತ್ತ ಹವಾಲ್ದಾರ್ ಸುಬ್ಬರಾಯ್ ಕೊಲೆ ಮಾಡಿರೋ ಆರೋಪಿಯಾಗಿದ್ದಾರೆ.
ಮಾಜಿ ಸೈನಿಕ ತನ್ನ ಸಹೋದರನ ಪತ್ನಿ ಮೇದಾ (32) ಮತ್ತು ಅನುಜ (8) ಅವರನ್ನು ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.