ವಜಾಗೊಳಿಸಿದ 41 ಬಿಎಸ್ಸೆನಲ್ ಗುತ್ತಿಗೆ ಕಾರ್ಮಿಕರ ಮರು ನೇಮಕಕ್ಕೆ ಸಿಐಟಿಯು ಆಗ್ರಹ

ವಜಾಗೊಳಿಸಿದ 41 ಬಿಎಸ್ಸೆನಲ್ ಗುತ್ತಿಗೆ ಕಾರ್ಮಿಕರ ಮರು ನೇಮಕಕ್ಕೆ ಸಿಐಟಿಯು ಆಗ್ರಹ

ರಾಯಚೂರು: ಬಿಎಸ್‍ಎನ್ ಎಲ್‍ ಗುತ್ತಿಗೆ ಕಾರ್ಮಿಕರಿಂದ 41 ಗುತ್ತಿಗೆ ಕಾರ್ಮಿಕರನ್ನು ವಜಾಗೊಳಿಸಿದ್ದನ್ನು ಖಂಡಿಸಿ ಸಿಐಟಿಯು
ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಇಂದು ನಗರದಲ್ಲಿ ಬಿಎಸ್‍ಎನ್ ಎಲ್‍ ಗುತ್ತಿಗೆ ಕಾರ್ಮಿಕರಿಂದ 41 ಗುತ್ತಿಗೆ ಕಾರ್ಮಿಕರನ್ನು ವಜಾಗೊಳಿಸಿದ್ದನ್ನು ಖಂಡಿಸಿ ಹಾಗೂ ಕೂಡಲೇ
ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳಬೇಕು ಎಂದು ಕಾರ್ಮಿಕರು  ಘೋಷಣೆ ಕೂಗಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ಮನವಿಪತ್ರವನ್ನು ಜಿಲ್ಲಾಧಿಕಾರಿ ಹಾಗೂ ಕಾರ್ಮಿಕ ಇಲಾಖೆ ಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಸಿಐಟಿಯುನ ಜಿಲ್ಲಾ ಕಾರ್ಯದರ್ಶಿ ಶೇಕ್ಷಾಖಾದ್ರಿ, ಜಂಟಿ ಕಾರ್ಯದರ್ಶಿ ಡಿ.ಎಸ್.ಶರಣಬಸವ ಸೇರಿದಂತೆ  ಅನೇಕ ಮುಖಂಡರು ಹಾಗೂ ಬಿಎಸ್‍ಎನ್‍ ಎಲ್‍ ಮುಖಂಡರು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos