ಬುಕ್ ಸಾಗರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

ಬುಕ್ ಸಾಗರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

ಬೆಂಗಳೂರು, ನ. 06: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕಲ್ಲು ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬುಕ್ ಸಾಗರ ಪಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನೂತನ ಅಧ್ಯಕ್ಷ ರಾಗಿ ಪಿಳ್ಳಪ್ಪರವರು  ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಪಿಳ್ಳಪ್ಪ ಅವರು,  ನನ್ನ ಮೇಲೆ ವಿಶ್ವಾಸವಿಟ್ಟು ಬೆಂಬಲಿಸಿರುವ ಸದಸ್ಯರುಗಳಿಗೆ ಧನ್ಯವಾದಗಳು ಈ ಭಾಗದ ಶಾಸಕರಾದ ಕೃಷ್ಣಪ್ಪ ಅವರಿಗೆ ಕೃತಜ್ಞತೆ, ಸಲ್ಲಿಸುತ್ತೇನೆ, ಅದಲ್ದೆ ಹಿಂದೆ ಇದ್ದ ಅಧ್ಯಕ್ಷರು ನಾಗರಾಜು ಅವರಿಗೆ ಹಾಗೂ ಆ ಸಮಯದಲ್ಲಿದ್ದ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಸಿಕ್ಕಿರುವ ಅವಕಾಶವನ್ನು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇನೆ, ಇನ್ನು ಈ ಕೃಷಿ ಪತ್ತಿನ ಸಂಘದಲ್ಲಿ, ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ, ಮನೆ ನಿರ್ಮಾಣ ಮಾಡೋದಕ್ಕೆ, ವ್ಯಾಪಾರ ಮಾಡೋದಕ್ಕೆ, ಸಬ್ಸಿಡಿ ಮೂಲಕ ಹಣ ನೀಡಲಾಗುವುದು, ಎಂದು ನೂತನ ಅಧ್ಯಕ್ಷ ಪಿಳ್ಳಪ್ಪ ಅವರು ತಿಳಿಸಿದರು.

ಇನ್ನು ಇದೇ ವೇಳೆ ಮಾತನಾಡಿದ ಮತ್ತೊಬ್ಬ ಸದಸ್ಯ, ಸುಮಾರು 43 ವರ್ಷಗಳಿಂದ ಸಂಸ್ಥೆ ಕೆಲಸ ನಿರ್ವಹಿಸಲಿದೆ, ಸಾರ್ವಜನಿಕ ಮತ್ತು ರೈತರ ಪರವಾಗಿ ಕೆಲಸ ನಿರ್ವಹಿಸಿದ,  ಒಂದು ನಿಟ್ಟಿನಲ್ಲಿ ಪಿಳ್ಳಪ್ಪನವರು ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿರುವುದು ಬಹಳ ಸಂತೋಷದ ವಿಷಯ.

ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಸಬ್ಸಿಡಿ ಮೂಲಕ ಹಣ ನೀಡಬೇಕು ಅಂತ ಅವರಿಗೆ ನಾನು ಕೇಳಿಕೊಳ್ಳುತ್ತೇನೆ ಎಂದು ತಿಳಿಸದರು.  ಈ ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಸದಸ್ಯರು ಮತ್ತು ಬೆಂಬಲಿಗರು ಭಾಗಿಯಾಗಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos