ಗಂಗಾವತಿ: ತಾಲೂಕಿನ ವೆಂಕಟಗಿರಿ ಹೋಬಳಿಯ ಗಡ್ಡಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಿದ್ದ ಕ್ಯಾಂಡಿಡೇಟ್ ಬಾಲಪ್ಪ ಮಾದಿನಾಳ ಅವರು, ತಾಲೂಕಿನ ಜನಪ್ರಿಯ ಶಾಸಕರಾದ ಪರಣ್ಣ ಮುನವಳ್ಳಿ ಸಮ್ಮುಖದಲ್ಲಿ ಗ್ರಾಮದಲ್ಲಿ ನೂತನವಾಗಿ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ವೀರಶೈವ-ಲಿಂಗಾಯತ ಯುವ ವೇದಿಕೆಯ ರಾಜ್ಯ ಸಂಚಾಲಕರಾದ ಹೇಮಂತ್ ರಾಜ್ ಗಡ್ಡಿ, ಭೂನ್ಯಾಯ ಮಂಡಳಿಯ ಸದಸ್ಯರು ಸಿದ್ದಲಿಂಗಯ್ಯ ಸ್ವಾಮಿ, ಕರಬಸಯ್ಯ ಸ್ವಾಮಿ, ಬಸಪ್ಪ ಹನುಮಟ್ಟಿ,ಭೀಮಣ್ಣ ಪೂಜಾರಿ, ಫಕೀರಪ್ಪ ಪೂಜಾರಿ, ಹುಲುಗಪ್ಪ ಹರಿಜನ, ಗ್ರಾಮದ ಎಲ್ಲಾ ಯುವಕ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು,