ಟ್ರೋಫಿ ಮುಡಿಗೆರಿಸಿಕೊಂಡ ಕರ್ನಾಟಕ

ಟ್ರೋಫಿ ಮುಡಿಗೆರಿಸಿಕೊಂಡ ಕರ್ನಾಟಕ

ಬೆಂಗಳೂರು, ಅ. 25: ವಿಜಯ್ ಹಜಾರೆ ಟ್ರೋಫಿ ರಣಜಿ ಏಕದಿನ ಟೂರ್ನಮೆಂಟ್ನಲ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಳೆ ಬಾಧಿತ ಫೈನಲ್ ಪಂದ್ಯದಲ್ಲಿ ಸಾಂಪ್ರಾದಾಯಿಕ ಬದ್ಧ ವೈರಿ ತಮಿಳುನಾಡು ತಂಡವನ್ನು ವಿಜೆಡಿ ನಿಯಮದನ್ವಯ 60 ರನ್ಗಳ ಅಂತರದಿಂದ ಮಣಿಸಿರುವ ದಕ್ಷಿಣ ಭಾರತದ ಎರಡು ಪ್ರಬಲ ತಂಡಗಳ ರೋಚಕ ಹಣಾಹಣಿಯಲ್ಲಿ  ಕರ್ನಾಟಕ ನಾಲ್ಕನೇ ಬಾರಿಗೆ ಕಿರೀಟ ಮುಡಿಗೇರಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು, ಪೀಣ್ಯ ಎಕ್ಸ್ಪ್ರೆಸ್ ಅಭಿಮನ್ಯು ಮಿಥುನ್ ದಾಳಿಗೆ  49.5  ಓವರ್ಗಳಲ್ಲಿ 252 ರನ್ ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು. ಗುರಿ ಬೆನ್ನಟ್ಟಿದ ಕರ್ನಾಟಕ 23 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದ್ದ ಸಂದರ್ಭದಲ್ಲಿ ಮಳೆ ಬರಲಾರಂಭಿಸಿತು. ಪರಿಣಾಮ ಪಂದ್ಯವನ್ನು ಮುಂದುವರಿಸಲಾಗದೇ ಜಯದೇವನ್ ನಿಯಮವನ್ನು ಆಳವಡಿಸಲಾಯಿತು.

ಇದು ನಾಲ್ಕನೇ ಬಾರಿಗೆ ಕರ್ನಾಟಕ ಕಿರೀಟ ಮುಡಿಗೇರಿಸಿದೆ. ಇದರೊಂದಿಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಫೈನಲ್ಗೆ ಪ್ರವೇಶಿಸಿದ ಎಲ್ಲ ನಾಲ್ಕು ಬಾರಿಯೂ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.

 

ಫ್ರೆಶ್ ನ್ಯೂಸ್

Latest Posts

Featured Videos