ಬೇತಮಂಗಲ, ಜೂ. 28 : ಟೊಮ್ಯಾಟೊ ಬೆಳೆಯುವ ಬದಲು ತೋಟದಲ್ಲಿ ಗಾಂಜಾ ಗಿಡಿ ಬೆಳೆದ ರೈತನ ವಿರುದ್ಧ ದೂರು ದಾಖಲಾಗಿದೆ. ಕಮ್ಮಸಂದ್ರ ಕೋಟಿಲಿಂಗ ದೇವಾಲಯ ಹಿಂಭಾಗದ ಮಿಜರಾಗುವ್ವಲಹಳ್ಳಿ ಸರ್ವೆ ನಂ.150ರ ಗೋಮಾಳ ಜಮೀನಿನಲ್ಲಿ ಬೆಳದ ಗಾಂಜಾ 5 ಗಿಡಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡದುಕೊಂಡಿದ್ದಾರೆ. ಆರೋಪಿ ಪ್ರಸಾದ್ ನಾಪತ್ತೆಯಾಗಿದ್ದಾನೆ. ದಾಳಿ ವೇಳೆ ಡಿವೈಎಸ್ಪಿ ಶ್ರೀನಿವಾಸಮೂರ್ತಿ, ಬೇತಮಂಗಲ ಪಿಎಸ್ಐ ಸುನೀಲ್ಕುಮಾರ್, ಬೇತಮಂಗಲ ವೃತ್ತ ಕಂದಾಯ ಇನ್ಸ್ಪೆಕ್ಟರ್ ಮಂಜುನಾಥ್, ಗ್ರಾಮ ಲೆಕ್ಕಿಗ ದಿನೇಶ್ ಮತ್ತಿತರರು ಇದ್ದರು.