ಟೊಮ್ಯಾಟೊ ಬದಲು ಜಮೀನಿನಲ್ಲಿ ಗಾಂಜಾ

ಟೊಮ್ಯಾಟೊ ಬದಲು ಜಮೀನಿನಲ್ಲಿ ಗಾಂಜಾ

ಬೇತಮಂಗಲ, ಜೂ. 28 : ಟೊಮ್ಯಾಟೊ ಬೆಳೆಯುವ ಬದಲು ತೋಟದಲ್ಲಿ ಗಾಂಜಾ ಗಿಡಿ ಬೆಳೆದ ರೈತನ ವಿರುದ್ಧ ದೂರು ದಾಖಲಾಗಿದೆ. ಕಮ್ಮಸಂದ್ರ ಕೋಟಿಲಿಂಗ ದೇವಾಲಯ ಹಿಂಭಾಗದ ಮಿಜರಾಗುವ್ವಲಹಳ್ಳಿ ಸರ್ವೆ ನಂ.150ರ ಗೋಮಾಳ ಜಮೀನಿನಲ್ಲಿ ಬೆಳದ ಗಾಂಜಾ 5 ಗಿಡಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡದುಕೊಂಡಿದ್ದಾರೆ. ಆರೋಪಿ ಪ್ರಸಾದ್ ನಾಪತ್ತೆಯಾಗಿದ್ದಾನೆ. ದಾಳಿ ವೇಳೆ ಡಿವೈಎಸ್ಪಿ ಶ್ರೀನಿವಾಸಮೂರ್ತಿ, ಬೇತಮಂಗಲ ಪಿಎಸ್ಐ ಸುನೀಲ್ಕುಮಾರ್, ಬೇತಮಂಗಲ ವೃತ್ತ ಕಂದಾಯ ಇನ್ಸ್ಪೆಕ್ಟರ್ ಮಂಜುನಾಥ್, ಗ್ರಾಮ ಲೆಕ್ಕಿಗ ದಿನೇಶ್ ಮತ್ತಿತರರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos