ದೇವರ ಕಿರೀಟ ಕದಿಯಲು ಬಂದ ಕಳ್ಳ

ಹೈದರಾಬಾದ, ನ.22 : ಭಕ್ತರಿಗೆ ದೇವರ ಮೇಲೆ ಎಷ್ಟು ಭಕ್ತಿ ಮುಖ್ಯವೋ, ಕಳ್ಳರಿಗೆ ಕಳ್ಳತನ ಮುಖ್ಯ. ದೇವಸ್ಥಾನವಾದರೇನು, ಮನೆಯೇಆದರೇನು.. ಅವರಿಗೆ ಬೇಕದಾದ ಹಣ, ಒಡವೆಗಳು ಸಿಗುತ್ತವೆಂದರೆ ಕನ್ನ ಹಾಕಲು ಕಳ್ಳರು ಸಿದ್ಧ. ಆದರೆ, ದೇವರ ವಿಗ್ರಹದ ತೆಲೆಗೆ ಹಾಕಿದ್ದ ಕಿರೀಟ್ ವನ್ನು ಕಳ್ಳತನ ಮಾಡಿರುವ ಘಟನೆ ಹೈದರಾಬಾದ್ ನ ಸಿಕಂದರಾಬಾದ್ ನಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗರ್ಭಗುಡಿಯೊಳಗೆ ಆಗಮಿಸಿದ ನಮಸ್ಕಾರ ಮಾಡಿ, ತನ್ನ ಕೈಗಳಿಂದ ಕಿವಿ ಹಿಡಿದುಕೊಂಡು ಕ್ಷೆಮೆ ಕೇಳಿದ ಬಳಿಕ ವಿಗ್ರಹದ ಕಿರೀಟ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳನ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos