ಹನೂರು: ಗ್ರಾಮವನ್ನು ಅಭಿವೃದ್ಧಿ ಮಾಡದೆ ಕೊನೆಗೂ ರೈತ ಮುಖಂಡರ, ಗ್ರಾಮಸ್ಥರ, ಅರಣ್ಯ ಇಲಾಖೆಯ ಅಧಿಕಾರಿಗಳ ಮತ್ತು ಜನ ಪ್ರತಿನಿಧಿಗಳ ಒಟ್ಟಾರೆ ಎಲ್ಲಾರ ಹೋರಾಟದ ಫಲವಾಗಿ ಸ್ಥಳಾಂತರಕ್ಕೆ ಕೊಳ್ಳೇಗಾಲ ತಾಲ್ಲೂಕು ಕೊತ್ತನ್ನೂರು ಸಮೀಪದಲ್ಲಿ ಗುರುತಿಸಲಾಗಿದೆ
ಚುನಾವಣೆ ಪೂರ್ವದಿಂದಿಡಿದು ಇಲ್ಲಿಯವರೆಗೂ ಹಲವಾರು ರಾಜಕೀಯ ವೈಶಮ್ಯದ ಹೋರಾಟಕ್ಕೆ ರೈತ ಸಂಘದ ಕೆಲವರನ್ನು ಮತ್ತು ಕೆಲವು ರೈತ ಮುಖಂಡರ ಮತ್ತು ಜೆಡಿಎಸ್ ಮುಖಂಡರ ನಡುವಿನ ಸಂಭAದ ಬಹಿರಂಗವಾಗಿರಲಿಲ್ಲ ಆದರೆ ಇತ್ತಿಚಿನ ದಿನಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಹತ್ತಿರವಾಗುತ್ತಿರುವಾಗ ರಾಜಕೀಯ ಪಕ್ಷದ ಮುಖಂಡರು ಪಕ್ಷಾಂತರ ಮಾಮುಲು ಆದರೆ ರೈತ ಮುಖಂಡರು ನಿಕಟವಾಗಿ ಸಂಪರ್ಕ ಹೊಂದುವುದು ಹಲವಾರು ನಿಷ್ಟಾವಂತ ರೈತ ಮುಖಂಡರಿಗೆ ಬೇಸರ ತರಿಸಿದೆ ಅಲ್ಲದೆ ಹನೂರು ತಾಲ್ಲೂಕು ಘಟಕವು ಇಬ್ಬಾಗವಾಗುದರಲ್ಲಿ ಸನಿಹವಿದೆ ಎಂದು ರೈತ ಮುಖಂಡರ ಆಗ್ರಹ
ಕರ್ನಾಟಕ ರಾಜ್ಯ ರೈತ ಸಂಘದ ಹನೂರು ಘಟಕ ತಾಲ್ಲೂಕು ಅಧ್ಯಕ್ಷ ಚೆಂಗಡಿ ಗ್ರಾಮದ ಕರಿಯಪ್ಪನ ಹೇಳಿಕೆ ಚೆರ್ಚೆಗೆ ಗ್ರಾಸವಾಗಿದೆ ಮತ್ತು ಸಾರ್ವಜನಿಕರು ಮುಖಂಡರ ಟೀಕೆಗೆ ಗುರಿಯಾಗಿದೆ.
ಚುನಾವಣೆ ಸೋತ ನಂತರ ತಾವು ಎಲ್ಲಿ ಹೊಗಿದ್ರಿ , ಕೊರೋನಾ ಸಂದರ್ಭದಲ್ಲಿ ತಾವು ಎಲ್ಲಿ ಹೊಗಿದ್ರಿ ಕೇವಲ ಚುನವಣಾ ಸಮಯದಲ್ಲಿ ಮಾತ್ರ ಜ್ಞಾನಬರುವದೆ ತಮ್ಮ ಜೊತೆಯಲ್ಲಿ ಪ್ರಾಮಾಣಿಕವಾಗಿ ದುಡಿದ ಪೊನ್ನಾಚಿ ಮಹಾದೇವಸ್ವಾಮಿ, ಜಯಸುಂದರ್, ಇನ್ನು ಮುಂತಾದ ಮುಖಂಡರ ಜೊತೆಯ ಸಂಬಂಧ ಹೇಗಿದೆ ನಿಮ್ಮ ವರ್ತನೆ ಹೇಗಿದೆ ಎನ್ನುವಂತಾಗಿದೆ ಕೇವಲ ಚುನಾವಣೆ ಸಮಯದಲ್ಲಿ ಸಂಘಟನೆಯ ಮುಖಂಡರನ್ನು ಎತ್ತಿಕಟ್ಟುವುದನ್ನು ಬಿಟ್ಟು ಹಿರಿಯ ಮುಖಂಡರನ್ನು ಕಡೆಗಣಿಸದೆ ಒಗ್ಗಟ್ಟು ಪ್ರದರ್ಶಿದರೆ ಮಾತ್ರ ಜಯ ಅದು ಬಿಟ್ಟು ಕೇವಲ ಅವಲ ಹಿಂಬಾಲಕರಿಂದ ಸಾದ್ಯವಿಲ್ಲ ಎಂಬುದನ್ನು ಮನಗಾಣಬೇಕು ಎಂದು ರೈತ ಮುಖಂಡರು ತಿಳಿಸಿದರು
ಚೆಂಗಡಿಗೆ ತನ್ನದೆ ಇತಿಹಾಸವಿದೆ
ಚೆಂಗಡಿ ಗ್ರಾಮ ನೆನ್ನೆ ಮೊನ್ನೆ ಹುಟ್ಟಿದ್ದಲ್ಲ ದಿವಂಗತ ಹೆಚ್.ನಾಗಪ್ಪ ಜಿ.ರಾಜುಗೌಡ ಕಾಲದಿಂದಲ್ಲೂ ಇದ್ದು ಇವರ ಸೇವೆ ಅಪಾರವಾಗಿದೆ ಗುಡ್ಡಬೆಟ್ಟಗಳನ್ನು ಹತ್ತಿಳಿದು ಹೋಗುತ್ತಿದ್ದ ಗ್ರಾಮಸ್ಥರಿಗೆ ಕಾಡಿನೊಳಗೆ ಕಚ್ಚಾ ರಸ್ತೆ ಆಗಬೇಕಾದರೆ ಆ ಮೂಲ ಪುರುಷರೇ ಕಾರಣ ಎಂಬುದು ಇವರಿಗೆ ಗೊತ್ತಲ್ಲದಿರಬಹುದು ಅಷ್ಟೇ ಯಾಕೆ ವಿದ್ಯುತ್ ಸಂಪರ್ಕ ಸಹ ಮೊದಲೆ ಮಾಡಲಾಗಿದೆ
ಅಷ್ಟೆ ಏಕೆ ಮಾಜಿ ಶಾಸಕಿ ಪರಿಮಳ ನಾಗಪ್ಪ ಹಾಲಿ ಶಾಸಕ ಆರ್.ನರೇಂದ್ರ ರವರ ಸೇವಾ ಕಾರ್ಯಗಳು ಅಪಾರವಾಗಿವೆ ಅದಲ್ಲದೆ ಈ ಭಾಗದ ಗಣಿ ಮಾಲೀಕರು ದೊಡ್ಡ ದೊಡ್ಡ ಉದ್ಯಮಿಗಳು ಮುಖಂಡರು ಗಳು ಅಧಿಕಾರಿ ವರ್ಗದವರು ಬೇಟಿ ನೀಡಿ ಜನರ ಸೇವೆ ಮಾಡಿದ್ದಾರೆ ಇತ್ತೀಚೆಗೆ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮತ್ತು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಬೇಟಿ ನೀಡಿರುವುದು ಮರೆತಂತೆ ಕಾಣುತಿದೆ
ಚಿಂಗಡಿ ಕರಿಯಪ್ಪ ರೈತ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಮುಖಂಡರೊ ಅಥವಾ ರಾಜಕಾರಣಿಯೋ ಗೊತ್ತಾಗುತ್ತಿಲ್ಲ ಗ್ರಾಮಕ್ಕೆ ಯಾರೆ ಬಂದರೂ ಆ ವ್ಯಕ್ತಿಗಳನ್ನೆಲ್ಲ ಈ ರೀತಿ ಓಲೈಸಿಕೊಂಡು ಮಾತನಾಡುವ ಪರಿಪಾಠದ ಮೂಲಕ ಅವರಿಂದ ಏನಾದರೂ ನಿರೀಕ್ಷೆಗಳನ್ನು ಇಟ್ಟುಕೊಂಡು ಹೀಗೆ ಮಾತನಾಡುತ್ತಿರಾ ಬಹುದು.ಎಂದು ಸಾವ೯ಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ