ಕಲಬುರಗಿ, ನ. 13 : ಹಳೆ ವೈಷಮ್ಯದ ಹಿನ್ನೆಲೆ ನ. 4ರಂದು ಚಲಿಸುತ್ತಿದ್ದ ಕಾರಿಗೆ ಕಾರಿನಿಂದ ಡಿಕ್ಕಿ ಹೊಡೆದು ಮಾರಕಾಸ್ತ್ರಗಳಿಂದ ವ್ಯಕ್ತಿಯನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಶಿವಲಿಂಗ ಕೊಲೆಯಾದ ವ್ಯಕ್ತಿ.
ಕೊಲೆ ಮಾಡಿದ ಆರೋಪಿಗಳಾದ ರವಿ ಹೊಸಮನಿ (24), ರಾಜು ಮಯೂರ್ (27), ರೋಹಿತ್ ಹೊಸಮನಿ (20), ಲೋಹಿತ್ ಹೊಸಮನಿ (22), ಗೋವಿಂದ ಕಾಂಬಳೆ (19) ಬಂಧಿತ ಆರೋಪಿಗಳು. ವಾಹನ, ಮಾರಕಾಸ್ತ್ರಗಳು ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿ ತಕೆಮರೆಸಿಕೊಂಡಿರುವ ಇನ್ನಷ್ಟು ಆರೋಪಿಗಳ ಪತ್ತೆಗೆ ಬಲೆ ಬೀಸಲಗಿದೆ ಎಂದು ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.