ಶಕ್ತಿ ದೇವತೆ ಚಾಮುಂಡೇಶ್ವರಿ ಸುಕ್ಷೇತ್ರ

ಶಕ್ತಿ ದೇವತೆ ಚಾಮುಂಡೇಶ್ವರಿ ಸುಕ್ಷೇತ್ರ

ಮೈಸೂರು, ಸೆ. 18: ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಸಂಬೋಧಿಸಲಾಗುವ ಮೈಸೂರು ನಗರದಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ಚಾಮುಂಡೇಶ್ವರಿ ಬೆಟ್ಟ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿದ್ದು, ತಾಯಿ ಚಾಮುಂಡೇಶ್ವರಿ ದೇವಿಯು ನೆಲೆಸಿರುವ ಪುಣ್ಯ ಕ್ಷೇತ್ರವಾಗಿದೆ.

ಮೈಸೂರು ಮೊದಲೆ ಪ್ರವಾಸದ ದೃಷ್ಟಿಯಿಂದ ಸಾಕಷ್ಟು ಹೆಸರುವಾಸಿಯಾದ ನಗರ. ಸಾಕಷ್ಟು ಆಕರ್ಷಕವಾದ ಪ್ರವಾಸಿ ಕೇಂದ್ರಗಳು ಮೈಸೂರು ನಗರ ಹಾಗೂ ಸುತ್ತಮುತ್ತಲು ಕಂಡುಬರುತ್ತವೆ.

18 ಮಹಾಶಕ್ತಿಪೀಠಗಳು: ಅಂತಹ ಕೆಲವು ಧಾರ್ಮಿಕ ತಾಣಗಳ ಪೈಕಿ ಚಾಮುಂಡಿ ಬೆಟ್ಟ ಹಾಗೂ ಅದರ ಮೇಲೆ ನೆಲೆಸಿರುವ ಚಾಮುಂಡೇಶ್ವರಿಯ ದೇವಾಲಯವೂ ಒಂದು. ಚಾಮುಂಡಿ

ಬೆಟ್ಟವು ಮೈಸೂರಿನ ಗುರುತರವಾದ ಪ್ರವಾಸಿ ಆಕರ್ಷಣೆಯಾಗಿದ್ದು, ಸಾಮಾನ್ಯವಾಗಿ ಮೈಸೂರಿಗೆ ಭೇಟಿ ನೀಡುವ ಎಲ್ಲ ಪ್ರವಾಸಿಗರಿಂದ ಭೆಟಿ ನೀಡಲ್ಪಡುತ್ತದೆ.

ಚಾಮುಂಡೇಶ್ವರಿ ದೇಗುಲ: ಚಾಮುಂಡಿ ಬೆಟ್ಟದ ಮೇಲೆ ನೆಲೆಸಿರುವ ಚಾಮುಂಡೇಶ್ವರಿ ದೇವಾಲಯವು ಒಂದು ಶಕ್ತಿಪೀಠವಾಗಿದೆ. ಕ್ರೌಂಚಪೀಠ ಎಂದೂ ಸಹ ಕರೆಯಲಾಗುವ ಶಕ್ತಿ ದೇವಿಯು ಮೈಸೂರು ಸಂಸ್ಥಾನದ ಅರಸರು ಹಿಂದಿನಿಂದಲೂ ಪ್ರಮುಖವಾಗಿ ಪೂಜಿಸಿಕೊಂಡು ಬರುತ್ತಿರುವ ದೇವಿಯಾಗಿದ್ದಾಳೆ.

ಮೈಸೂರು ನಗರದ ಅರಮನೆಯ ತಾಣದಿಂದ ದೂರದಲ್ಲಿ ಅದ್ಭುತವಾಗಿ ಕಂಡುಬರುವ ಚಾಮುಂಡಿ ಬೆಟ್ಟವು ತನ್ನ ಅಗಾಧ ವೈಭವದಿಂದಲೆ ಜನರನ್ನು ತನ್ನೆಡೆಗೆ ಆಕರ್ಷಿಸುತ್ತದೆ ದಂತಕಥೆಯ ಪ್ರಕಾರ,

ರಂಭನೆಂಬ ಬಲಶಾಲಿ ಅಸುರನೊಬ್ಬನು ಮಹಿಷಿ ಎಂಬ ಅರ್ಧ ಮನುಷ್ಯ ಹಾಗೂ ಅರ್ಧ ಎಮ್ಮೆಯ ರೂಪದ ರಾಕ್ಷಸಿಯನ್ನು ನೋಡಿ ಮೋಹಿತನಾಗಿ ಅವಳನ್ನು ಸೇರಿದನು.

ಇವರಿಬ್ಬರ ಮಿಲನದಿಂದ ಹುಟ್ಟಿದ ರಾಕ್ಷಸನೆ ಮಹಿಷಾಸುರ. ಹಿಂದೆ ರಂಭನು ಅಗ್ನಿಯ

ಕುರಿತು ಕಠಿಣವಾದ ತಪಸ್ಸನ್ನಾಚರಿಸಿ ಅತ್ಯಂತ ಬಲಶಾಲಿಯಾದ ಪುತ್ರ ಪಡೆಯುವ ವರದಾನ ಪಡೆದಿದ್ದನು. ಅದರಂತೆ ಮಹಿಷಿಯಿಂದ ಹುಟ್ಟಿದ ರಂಭನ ಮಗನಾದ ಮಹಿಷಾಸುರನು ಅತ್ಯಂತ ಬಲಶಾಲಿಯಾಗಿದ್ದನು.

ಹಾಗೂ ಅವನೂ ಸಹ ತಪಸ್ಸು ಮಾಡಿ ಇನ್ನಷ್ಟು ಶಕ್ತಿಶಾಲಿಯಾಗಿ ಮೂರು ಲೋಕಗಳಲ್ಲಿ ತನ್ನ ಸಾರ್ವಭೌಮತ್ವ ಸ್ಥಾಪಿಸಿದನು.

ಈತನಿಂದ ದೇವತೆಗಳು ಪಡಬಾರದ ಕಷ್ಟ ಪಟ್ಟರು ಹಾಗೂ ಲೋಕದ ಜನರೆಲ್ಲ ಮಹಿಷಾಸುರನ ಅತ್ಯಾಚಾರದಿಂದ ಬಳಲಿ ಬೆಂಡಾದರು. ಕೊನೆಗೆ ಎಲ್ಲ ದೇವತೆಗಳು ತ್ರಿಮೂರ್ತಿಗಳ ಬಳಿ ತೆರಳಿ ವಸ್ತುಸ್ಥಿತಿ ವಿವರಿಸಿದಾಗ ತ್ರಿಮೂರ್ತಿಗಳು ತಮ್ಮೆಲ್ಲ ಶಕ್ತಿಯನ್ನು ಒಂದೆಡೆ ಧಾರೆ ಎರೆದರು.

ಈ ಶಕ್ತಿಯಿಂದ ಅತ್ಯಂತ ಭಯಂಕರ ರೂಪದ ಶಕ್ತಿ ದೇವಿಯೊಬ್ಬಳು ಪ್ರತ್ಯಕ್ಷಳಾದಳು. ಅವಳೆ ಚಾಮುಂಡಿ. ಹೀಗೆ ಪ್ರತ್ಯಕ್ಷಳಾದ ಚಾಮುಂಡಿ ಹೂಂಕರಿಸುತ್ತ ಮಹಿಷಾಸುರನ ಬಳಿ ತೆರಳಿ ಭೀಕರ ಯುದ್ಧ ಮಾಡ ತೊಡಗಿದಳು.

ಅತ್ಯಂತ ಬಲಶಾಲಿಯಾಗಿದ್ದ ಮಹಿಷಾಸು

ರನು ಸಾಕಷ್ಟು ಪ್ರತಿರೋಧವನ್ನು ಒಡ್ಡಿದನು. ಹೀಗೆ ಒಂಭತ್ತು ದಿನಗಳ ಕಾಲ ಯುದ್ಧ ನಡೆದು ಕೊನೆಗೆ ಚಾಮುಂಡಿಯು ಮಹಿಷಾಸುರನನ್ನು ವಧಿಸಿದಳು.

 ಚಾಮುಂಡೇಶ್ವರಿ ದೇಗುಲ: ಒಂಭತ್ತು ದಿನಗಳ ಕಾಲ ಚಾಮುಂಡಿ ಬೆಟ್ಟದ ಮೇಲೆ ಜರುಗಿತೆಂಬ ಪ್ರತೀತಿಯಿದೆ. ಹೀಗಾಗಿ ದೇವಿಯು ತದನಂತರ ಈ ಬೆಟ್ಟವನ್ನೆ ಆಯ್ಕೆ ಮಾಡಿ ಅಲ್ಲಿ ಶಾಶ್ವತವಾಗಿ ನೆಲೆಸಿದಳು ಎನ್ನುತ್ತದೆ ಇಲ್ಲಿನ ಸ್ಥಳ ಪುರಾಣ.

ಮಹಿಷನು ಈ ಸ್ಥಳದಲ್ಲಿಯೆ ತನ್ನ ಸಾಮ್ರಾಜ್ಯ ಹೊಂದಿದ್ದನು ಹಾಗೂ ಅದು ಮಹಿಷನ ಊರು ಎಂದು ಕರೆಯಲ್ಪಡುತ್ತಿತ್ತು. ಈ ಶಬ್ದವೆ ಕ್ರಮೇಣವಾಗಿ ಮಹಿಷೂರು ನಂತರ ಮೈಸೂರು ಎಂದಾಯಿತು ಎಂದು ಹೇಳಲಾಗುತ್ತದೆ ಹಾಗೂ ಚಾಮುಂಡೇಶ್ವರಿಯನ್ನು ಮಹಿಷಾಸುರ ಮರ್ದಿನಿ ಎಂತಲೂ ಸಹ ಕರೆಯಲಾಗುತ್ತದೆ.

ದೇವಾಲಯ ನಿರ್ಮಾಣ: ಚಾಮುಂಡಿ ಬೆಟ್ಟದ ಮೆಲಿರುವ ಚಾಮುಂಡೇಶ್ವರಿಯ ದೇವಾಲಯವು ಹೊಯ್ಸಳ ವಾಸ್ತುಶೈಲಿಗೆ ಸಾಕ್ಷಿಯಾಗಿದ್ದು, ಹೊಯ್ಸಳ ದೊರೆ ವಿಷ್ಣುವರ್ಧನನಿಂದ ನಿರ್ಮಿಸಲ್ಪಟ್ಟಿದೆ.

ವಿಜಯನಗರ ಸಾಮ್ರಾಜ್ಯ ಹಾಗೂ ಮೈಸೂರು ಅರಸರುಗಳಿಂದ ಮತ್ತಷ್ಟು ನವೀಕರಣಗೊಳಿಸಲ್ಪಟ್ಟಿತು. ಚಾಮುಂಡೇಶ್ವರಿ ದೇವಾಲಯದ ದೇವಾಲಯದ ಮುಖ್ಯ ಆಕರ್ಷಣೆ ಎಂದರೆ ಅದ್ಭುತವಾಗಿ ನಿರ್ಮಿಸಲಾಗಿರುವ ದೇವಾಲಯ ಗೊಪುರ. ಮೊದ ಮೊದಲು ಇಷ್ಟು ಸುಂದರವಾದ ಗೋಪುರ ಈ ದೇವಾಲಯಕ್ಕಿರಲಿಲ್ಲ. 1825-26 ರ ಸಂದರ್ಭದಲ್ಲಿ ಮೂರನೇಯ ಕೃಷ್ಣರಾಜ ವಡೇಯರ್ ಅವರಿಂದ ಗೋಪುರ ನಿರ್ಮಿಸಲ್ಪಟ್ಟಿತು.

ಭಕ್ತಾದಿಗಳು ದೇವಿಯ ದರ್ಶನಕ್ಕೆ ಬರಲು ಅನುಕೂಲವಾಗುವಂತೆ ವಡೇಯರ್ ಅರಸರುಗಳಿಂದಲೆ ಬೆಟ್ಟ ಏರಲು ಸಾವಿರ ಮೆಟ್ಟಿಲುಗಳನ್ನು ಕೊರೆಯಲಾಯಿತು. ಬೆಟ್ಟ ಏರುವ ಸಂದರ್ಭದಲ್ಲಿ ಶಿವನ ವಾಹನವಾದ ನಂದಿಯನ್ನು ಕಾಣಬಹುದು.

ಏಕಶಿಲೆಯಲ್ಲಿ ಅದ್ಭುತವಾಗಿ ಕೆತ್ತಲಾದ ಬಸವನ ಪ್ರತಿಮೆ ಆಕರ್ಷಣೆಯಾಗಿದೆ. ಗಮನಸೆಳೆವ ಪ್ರತಿಮೆಯೆಂದರೆ ಕೀಚಕನದ್ದು. ಮಹಿಷಾಸುರನನ್ನು ಭಯಂಕರ ರೂಪದಲ್ಲಿ ನಿರ್ಮಿಸಲಾದ ಪ್ರತಿಮೆ ಇದಾಗಿದ್ದು, ಪ್ರವಾಸಿಗರ ಗಮನ ಸೆಳೆಯುತ್ತದೆ.

ಚಾಮುಂಡೇಶ್ವರಿ ದೇವಾಲಯದ ಬಳಿಯಲ್ಲೆ ಶಿವನಿಗೆ ಮುಡಿಪಾದ ಮಹಾಬಲೇಶ್ವರನ ದೇವಾಲಯವಿದೆ. ಇದು ಚಾಮುಂಡೇಶ್ವರಿ ದೇವಾಲಯಕ್ಕಿಂತಲೂ ಪುರಾತನವಾದ ದೇವಾಲಯ ಎನ್ನಲಾಗಿದೆ.

ಸಾರಿಗೆ ವ್ಯವಸ್ತೆ: ಮೈಸೂರು ನಗರ ಕೇಂದ್ರ ಬಸ್ಸು ನಿಲ್ದಾಣದಿಂದ ನಿರಂತರವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳಲು ಹಾಗೂ ಅಲ್ಲಿಂದ ಮರಳಲು ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಬಾಡಿಗೆ ರಿಕ್ಷಾ ಹಾಗೂ ಕಾರುಗಳೂ ಸಹ ದೊರೆಯುತ್ತವೆ.

 

 

ಫ್ರೆಶ್ ನ್ಯೂಸ್

Latest Posts

Featured Videos