ಪಿರಿಯಾಪಟ್ಟಣ: ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಕಲ್ಲು ತೂರಾಟದಿಂದ ಗಾಜು ಪುಡಿಯಾಗಿ ಪ್ರಯಾಣಿಕರು ಪಾರಾದ ಘಟನೆ ಸೋಮವಾರ ನಡೆಯಿತು.
ತಾಲೂಕಿನ ಸಿಗೂರು ಗ್ರಾಮದ ಬಳಿ ಈ ಘಟನೆ ನಡೆದಿದ್ದು ಬೆಟ್ಟದಪುರ ದಿಂದ ಪಿರಿಯಾಪಟ್ಟಣಕ್ಕೆ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಮರೆಯಿಂದ ತಿಳಿಗೇಡಿಗಳು ಈ ಕೃತ್ಯವೆಸಗಿದ್ದಾರೆ.
ಬೆಟ್ಟದಪುರ ದಿಂದ ಪಿರಿಯಾಪಟ್ಟಣಕ್ಕೆ ಸಂಚರಿಸುತ್ತಿದ್ದ ಈ ಬಸ್ಸಿನಲ್ಲಿ ೨೬ಮಂದಿ ಪ್ರಯಾಣಿಕರ ಪೈಕಿ ಆರು ಮಂದಿ ಕೆ ಎಸ್ ಆರ್ ಟಿ ಸಿ ಪಿರಿಯಾಪಟ್ಟಣ ಘಟಕದ ಸಿಬ್ಬಂದಿಗಳು ಇದ್ದರು.
ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪಿರಿಯಾಪಟ್ಟಣ ಕೆಎಸ್ಆರ್ಟಿಸಿ ಘಟಕದ ವ್ಯವಸ್ಥಾಪಕ ದರ್ಶನ್ ಮತ್ತು ಸಿಬ್ಬಂದಿಗಳು ಹಾಗೂ ಬೆಟ್ಟದಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ ಅವರು ದೂರು ದಾಖಲಿಸಿಕೊಂಡು ನಂತರ ಪಿರಿಯಪಟ್ಟಣ ಬಸ್ ನಿಲ್ದಾಣಕ್ಕೆ ಪ್ರಯಾಣಿಕರನ್ನು ಕರೆತಂದು ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಯಿತು.