ಬೆಂಗಳೂರು, ಜ. 14: ನಾಡಿನಾದ್ಯಂತ ಇಂದು ಮತ್ತು ನಾಳೆ ಸಂಕ್ರಾಂತಿ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಬಿಎಂಟಿಸಿ ಕುಟುಂಬದೊಂದಿಗೆ ಈ ಸಂಕ್ರಾಂತಿ ಹಬ್ಬದ ಸಂಭ್ರಮವನ್ನ ಆಚರಿಸಿದ ಎನ್ ಎಸ್ ನಂದೀಶ್ ರೆಡ್ಡಿ. ಸಂಕ್ರಾಂತಿ ಎಲ್ಲರಿಗೂ ಶುಭ ತರಲಿ ಹಾಗೂ ಎಳ್ಳು ಬೆಲ್ಲದ ಸಿಹಿಯಂತೆ ವರ್ಷಪೂರ್ತಿ ಸಿಹಿ ನಿಮ್ಮ ಜೊತೆಗಿರಲಿ ಎಂದು ಬಿಎಂಟಿಸಿ ಕುಟುಂಬಕ್ಕೆ ಶುಭಹಾರೈಸಿದ ನಂದೀಶ್ ರೆಡ್ಡಿ.
ಬಿಎಂಟಿಸಿಯ ಎಲ್ಲ ಸಿಬ್ಬಂದಿಗಳಿಗೂ ಸ್ವತಃ ಎಳ್ಳು ಮತ್ತು ಬೆಲ್ಲವನ್ನು ವಿತರಿಸಿ ಸಂಕ್ರಾಂತಿಯ ಶುಭಾಶಯಗಳನ್ನು ತಿಳಿಸಿದ ಬಿಎಂಟಿಸಿ ಅಧ್ಯಕ್ಷರು.