ಬೆಂಗಳೂರು, ಮಾ. 21, ನ್ಯೂಸ್ ಎಕ್ಸ್ ಪ್ರೆಸ್: ವ್ಯಕ್ತಿಯೊಬ್ಬ 5 ಅಂತಸ್ತಿನ ಬಹು ಮಹಡಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶೇಷಾದ್ರಿಪುರಂ ಬಳಿ ನಡೆದಿದೆ.
ಪ್ರವೀಣ್(40) ಆತ್ಮಹತ್ಯೆ ಮಾಡಿಕೊಂಡವರು. ಪ್ರವೀಣ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು ಕಳೆದ 3 ವರ್ಷಗಳಿಂದ ಆನಂದ್ ರಾವ್ ಸರ್ಕಲ್ ನಲ್ಲಿರುವ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು.
6 ತಿಂಗಳ ಹಿಂದೆ ಕೆಲಸ ಬಿಟ್ಟು ಹೋಗಿ ವಾರದ ಹಿಂದಷ್ಟೇ ಬಂದು ಕೆಲಸಕ್ಕೆ ಸೇರಿದ್ದ.
2-3 ದಿನ ಕೆಲಸಕ್ಕೆ ಹೋಗಿ 2 ದಿನದಿಂದ ಕುಡಿದು ರೂಮಿನಲ್ಲೇ ಇದ್ದ, ಬಳಿಕ ಮಾ.20ರಂದು ಸಂಜೆ 7 ಗಂಟೆ ಹೊತ್ತಿಗೆ ಬಹು ಮಹಡಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.