ವಿದ್ಯಾರ್ಥಿನಿಯ ರೇಪ್ ಅಂಡ್ ಮರ್ಡರ್.!?

ವಿದ್ಯಾರ್ಥಿನಿಯ ರೇಪ್ ಅಂಡ್ ಮರ್ಡರ್.!?

ರಾಯಚೂರು, ಏ. 19, ನ್ಯೂಸ್ ಎಕ್ಸ್ ಪ್ರೆಸ್: ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿರುವ ಎಂಜನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯ ಸಾವಿನ ಪ್ರಕರಣಕ್ಕೆ ನ್ಯಾಯಬೇಕೆಂದು ದೊಡ್ಡ ಆಂದೋಲನವೇ ಆರಂಭಗೊಂಡಿದೆ.

ರಾಯಚೂರಿನ ನವೋದಯ ಇಂಜನಿಯರಿಂಗ್ ಕಾಲೇಜಿನಲ್ಲಿ 5ನೇ ಸೆಮಿಸ್ಟರ್ ಇಂಜನಿಯರಿಂಗ್ ಓದುತ್ತಿದ್ದ ಐಡಿಎಸ್ಎಂಟಿ ಬಡಾವಣೆಯ ವಿದ್ಯಾರ್ಥಿನಿ ಏ.13ರಿಂದ ಕಾಣೆಯಾಗಿದ್ದಳು. ಪೋಷಕರು ಎಲ್ಲಾ ಕಡೆ ಹುಡುಕಿದರೂ ಮಾಹಿತಿ ಸಿಕ್ಕಿರಲಿಲ್ಲ.

ಏ.17ರಂದು ಆಕೆಯ ಜನ್ಮದಿನವಾಗಿತ್ತು. ಆದರೆ, ಏ.16ರಂದು ಕೊಳೆತ ಸ್ಥಿತಿಯಲ್ಲಿ ಈ ವಿದ್ಯಾರ್ಥಿನಿಯ ಮೃತ ದೇಹ ನಗರದ ದೇವಸ್ಥಾನದ ಹಿಂದಿನ ಬೆಟ್ಟದಲ್ಲಿ ಪತ್ತೆಯಾಗಿತ್ತು.

ನೇಣು ಬಿಗಿದ ಸ್ಥಿತಿಯಲ್ಲಿ ಕುಳಿತುಕೊಂಡಿದ್ದ ಮೃತದೇಹವನ್ನು ಒಂದು ದಿನದ ನಂತರ ಪೊಲೀಸರು ಕೆಳಗಿಳಿಸಿದ್ದಾರೆ. ಪೋರೆನ್ಸಿಕ್ಸ್ ತಜ್ಞರು ಬಂದು ಸ್ಥಳ ಪರಿಶೀಲನೆ ಮಾಡುವವರೆಗೂ ಮೃತ ದೇಹವನ್ನು ತೆಗೆದಿರಲಿಲ್ಲ.

ಆರಂಭದಲ್ಲಿ ವಿದ್ಯಾರ್ಥಿನಿಯ ಶವದ ಬಳಿ ಡೆತ್ನೋಟ್ ಸಿಕ್ಕಿದ್ದು, ಅದರಲ್ಲಿ ತಾನು ಪದೇ ಪದೇ ಅನುತ್ತೀರ್ಣನಾಗುತ್ತಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ನಮೂದಿಸಿತ್ತು ಎನ್ನಲಾಗಿದೆ.

ಆದರೆ, ಇದನ್ನು ತಳ್ಳಿ ಹಾಕಿರುವ ವಿದ್ಯಾರ್ಥಿನಿಯ ತಾಯಿ ಮತ್ತು ಕುಟುಂಬದ ಸದಸ್ಯರು, ಆಕೆ ವ್ಯಾಸಂಗದಲ್ಲಿ ಮುಂದಿದ್ದಳು. ಅನುತ್ತೀರ್ಣಳಾಗೇ ಇರಲಿಲ್ಲ ಎಂದು ವಾದಿಸಿದ್ದಾರೆ.

ಆರಂಭದಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದ ಪೊಲೀಸರು ಮೃತಳ ತಾಯಿಯ ದೂರು ಆಧರಿಸಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ದೂರು ದಾಖಲಿಸಿದ್ದಾರೆ.

ಶವ ಪತ್ತೆಯಾದ ಮರು ದಿನ ಸುದರ್ಶನ್ ಯಾದವ್ ಎಂಬ ಯುವಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಆತ ವಿದ್ಯಾರ್ಥಿನಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದು, ಇತ್ತೀಚಿಗೆ ವಿದ್ಯಾರ್ಥಿನ ಮೊಬೈಲ್ ಕೂಡ ಕಸಿದುಕೊಂಡಿದ್ದ ಎಂದು ಪೋಷಕರು ಆರೋಪಿಸಿದ್ದಾರೆ.

ವಿದ್ಯಾರ್ಥಿನಿ ಮೇಲೆ ಸಮೂಹಿಕವಾಗಿ ಅತ್ಯಾಚಾರ ಮಾಡಿ ಭೀಕರವಾಗಿ ಕೊಲೆ ಮಾಡಲಾಗಿದೆ, ನಂತರ ಆತ್ಮಹತ್ಯೆ ಎಂದು ನಂಬಿಸಲು ನೇಣು ಹಾಕಲಾಗಿದೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos