ತುಮಕೂರು: ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನ ಮುಕ್ತಾಯವಾಗಿದ್ದು, ಮೆರವಣಿಗೆಗೆ ಸಿದ್ದತೆ ನಡೆಸಲಾಗುತ್ತಿದೆ.
ಮೆರವಣಿಗೆಗೆ ರುದ್ರಾಕ್ಷಿ ರಥದ ಸಿದ್ಧತೆ ನಡೆಸಲಾಗುತ್ತಿದ್ದು, ಮಠದ ಆವರಣದಲ್ಲಿ ಒಂದು ಸುತ್ತು ಹಾಕಿ, ಮೆರವಣಿಗೆ ಆರಂಭವಾಗಲಿದೆ.
ವೇದಿಕೆಯಿಂದ ಗದ್ದುಗೆ ಸ್ಥಳದವರೆಗೆ ಸ್ವಾಮೀಜಿ ಶರೀರದ ಮೆರವಣಿಗೆ ನಡೆಯಲಿದ್ದು, ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಸಮಾಧಿ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ಉಪಸ್ಥಿತರಿದ್ದಾರೆ.