ಕನ್ನಡಿಗರು ಬಿಜೆಪಿಗೆ ಸರಿಯಾಗಿ ಪಾಠ ಕಲಿಸ್ತಾರೆ: ಸಿಎಂ ಸಿದ್ದರಾಮಯ್ಯ

ಕನ್ನಡಿಗರು ಬಿಜೆಪಿಗೆ ಸರಿಯಾಗಿ ಪಾಠ ಕಲಿಸ್ತಾರೆ: ಸಿಎಂ ಸಿದ್ದರಾಮಯ್ಯ

ಮೈಸೂರು: ಲೋಕಸಭಾ ಚುನಾವಣೆಗೆ ಇನ್ನೇನು ಕೆಲ ದಿನಗಳು ಬಾಕಿ ಉಳಿದಿದ್ದು ಎಲ್ಲ ಪಕ್ಷಗಳು ಮತಯಾಚನೆ ಮಾಡುತ್ತಿದ್ದಾರೆ. ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದಾರೆ.  ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

ಅಮಿತ್ ಶಾ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಮಿತ್ ಶಾಗೆ  ಕನ್ನಡಿಗರ ಮತ ಕೇಳಲು ಯಾವ ನೈತಿಗತೆಯೂ  ಇಲ್ಲ. ಬರಗಾಲದ ಪರಿಹಾರವಾಗಿ 5 ಪೈಸೆಯೂ ನೀಡಿಲ್ಲ.

ಅಮಿತ್ ಶಾ ತಮ್ಮ ಮನೆಯಿಂದ ಪರಿಹಾರ ಕೊಡ್ತಾರ ಎಂದು ಪ್ರಶ್ನಿಸಿದರು. ಮೊದಲು ಬರ ಪರಿಹಾರ ನೀಡಿ ನಂತರ ಕರ್ನಾಟಕಕ್ಕೆ ಬರಲಿ.  ಕನ್ನಡಿಗರು ಬಿಜೆಪಿಗೆ ಸರಿಯಾಗಿ ಪಾಠ ಕಲಿಸ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದರು.

ಫ್ರೆಶ್ ನ್ಯೂಸ್

Latest Posts

Featured Videos