ಶ್ರೇಯಸ್ ಅಯ್ಯರ್​ಗೆ ಬಿತ್ತು ಬಾರಿ ದಂಡ

ಶ್ರೇಯಸ್ ಅಯ್ಯರ್​ಗೆ ಬಿತ್ತು ಬಾರಿ ದಂಡ

ಬೆಂಗಳೂರು: ಐಪಿಎಲ್ 2024 ರ 31ನೇ ಪಂದ್ಯದಲ್ಲಿ 223 ರನ್​ಗಳ ಬೃಹತ್​ ಟಾರ್ಗೆಟ್ ನೀಡಿದ ಹೊರತಾಗಿಯೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹೀನಾಯ ಸೋಲು ಅನುಭವಿಸಬೇಕಾಯಿತು.

ಗೆಲ್ಲುವ ಪಂದ್ಯವನ್ನು ಕೈಯ್ಯಾರೆ ಕೈಚೆಲ್ಲಿದ ಆಘಾತದಲ್ಲಿದ್ದ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್​ಗೆ ಬಿಸಿಸಿಐ ಬಿಗ್ ಶಾಕ್ ನೀಡಿದೆ. ಅದರಂತೆ ಅಯ್ಯರ್ ಮತ್ತೊಮ್ಮೆ ಈ ಲೋಪ ಎಸಗಿದರೆ ಪಂದ್ಯದಿಂದಲೇ ಹೊರಗುಳಿಯಬೇಕಾಗುತ್ತದೆ.

ವಾಸ್ತವವಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಈ ಪಂದ್ಯದಲ್ಲಿ ನಿಗದಿತ ಸಮಯಕ್ಕೆ ಓವರ್ ಮುಗಿಸದಿದ್ದಕ್ಕಾಗಿ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್​ಗೆ ಪಂದ್ಯ ಶುಲ್ಕದಲ್ಲಿ 12 ಲಕ್ಷ ರೂಗಳನ್ನು ದಂಡವಾಗಿ ವಿಧಿಸಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos