ಚಿಕ್ಕಮಗಳೂರು: ತರೀಕೆರೆ ರೈಲ್ವೆ ಅಧಿಕಾರಿಗಳ ಕಣ್ ತಪ್ಪಿನಿಂದ ಕುಮಾರಿ ಶೋಭಾ ಕರಂದ್ಲಾಜೆ ಅವರು ಶ್ರೀಮತಿ ಶೋಭಾ ಕರಂದ್ಲಾಜೆಯಾಗಿದ್ದಾರೆ.
ಇಂದು ಶುಕ್ರವಾರ ಮಧ್ಯಾಹ್ನ ತರೀಕೆರೆಯಲ್ಲಿ ರೈಲ್ವೆ ಪ್ಲಾಟ್ ಫಾರಂ ವಿಸ್ತರಣೆ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕೆಂದು ಮಾಡಿಸಲಾಗಿದ್ದ ಆಮಂತ್ರಣ ಪತ್ರಿಕೆಯಲ್ಲಿ ಶೋಭಾ
ಕರಂದ್ಲಾಜೆಗೆ ಅಧಿಕಾರಿಗಳು ಶ್ರೀಮತಿಯನ್ನಾಗಿ ಮಾಡಿದ್ದಾರೆ.
ರೈಲ್ವೆ ಫ್ಲಾಟ್ ಫಾರಂ ವಿಸ್ತರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಆದ ಈ ಯಡವಟ್ಟು ನೋಡಿ ರಾಷ್ಟ್ರಮಟ್ಟದಲ್ಲಿ ಕುಮಾರಿ ಎಂದು ಗುರುತಿಸಿಕೊಂಡಿದ್ದ ಸಂಸದೆ ಶೋಭಾ ಕರಂದ್ಲಾಜೆಗೆ ಅವಮಾನವಾದಂತಾಗಿದೆ.