ನಾನೂ ಒಮ್ಮೆ ಎಸ್.ಎಸ್.ಎಲ್.ಸಿ.ಯಲ್ಲಿ ಫೇಲಾಗಿದ್ದೆ… ಶಿವರಾಜ್ ಕೆ.ಆರ್.ಪೇಟೆ!

ನಾನೂ ಒಮ್ಮೆ ಎಸ್.ಎಸ್.ಎಲ್.ಸಿ.ಯಲ್ಲಿ ಫೇಲಾಗಿದ್ದೆ… ಶಿವರಾಜ್ ಕೆ.ಆರ್.ಪೇಟೆ!

ಬೆಂಗಳೂರು, ಏ. 30, ನ್ಯೂಸ್ ಎಕ್ಸ್ ಪ್ರೆಸ್:   ಎಸ್​​​​ಎಸ್​​​​ಎಲ್​​ಸಿಯಲ್ಲಿ ಫೇಲಾಗಿ ದುಡುಕು ನಿರ್ಧಾರ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್​​​​​ ಕೆ.ಆರ್. ಪೇಟೆ ಬುದ್ಧಿವಾದ ಹೇಳಿದ್ದಾರೆ. ನಾನೂ ಕೂಡಾ ಎಸ್​​​​ಎಸ್​​​​ಎಲ್​​ಸಿಯಲ್ಲಿ ಎರಡು ಸಬ್ಜೆಕ್ಟ್ ಫೇಲ್ ಆಗಿದ್ದೆ. ಆದರೆ ಧೈರ್ಯಗೆಡದೆ ಮತ್ತೆ ಎಕ್ಸಾಂ ಬರೆದು ಪಾಸಾಗಿ ಇಂದು ಈ ಸ್ಥಾನಕ್ಕೆ ಬಂದು ನಿಂತಿದ್ದೇನೆ. ಫೇಲ್ ಆದೆ ಎಂಬ ಒಂದೇ ಕಾರಣಕ್ಕೆ ಅನಾಹುತ ಮಾಡಿಕೊಂಡು ತಂದೆ, ತಾಯಿಗಳಿಗೆ ನೋವು ಕೊಡಬೇಡಿ ಎಂದು ಶಿವರಾಜ್ ಮನವಿ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos