ಶಿವಮೊಗ್ಗ ಜಿಲ್ಲೆಯಲ್ಲಿ ಸಂಚಾರ ಸ್ಥಗಿತ

ಶಿವಮೊಗ್ಗ ಜಿಲ್ಲೆಯಲ್ಲಿ ಸಂಚಾರ ಸ್ಥಗಿತ

ಶಿವಮೊಗ್ಗ,ಆ.10: ಸುರಿದ ಮಳೆಯಿಂದ ಆನಂದಪುರ ಸುತ್ತಮುತ್ತ ಭಾರಿ ಅನಾಹುತ ಸಂಭವಿಸಿದೆ. ಧಾರಕಾರ ಮಳೆಯಿಂದಾಗಿ ಶಿಕಾರಿಪುರ-ಆನಂದಪುರ ಹೆದ್ದಾರಿ 3 ಅಡಿಗೂ ಹೆಚ್ಚು ನೀರು ರಸ್ತೆ ಮೇಲೆ ನಿಂತಿದ್ದು ಜನರು ಹಾಗೂ ವಾಹನ ಸವಾರರು ಹರಸಾಹಸ ಪಡುವಂತಾಗಿದೆ.
ಆಟೋ ಕೆಂಚಪ್ಪ ಎಂಬುವರ ಮನೆಗಳಿಗೆ ನೀರು ನುಗ್ಗಿದೆ. ಹೆದ್ದಾರಿಯಲ್ಲಿ 200 ಮೀಟರ್ ಉದ್ದ ನೀರು ನಿಂತಿದ್ದು ಸುಮಾರು 2-3 ತಾಸು ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ನಂತರ ಗ್ರಾಮಾಡಳಿತ, ಕಂದಾಯ ಇಲಾಖೆ ಮತ್ತು ಪೋಲೀಸರು ಸ್ಥಳಕ್ಕೆ ಆಗಮಿಸಿದ್ದು, ನೀರು ಹೋರ ಹಾಕುವುದಕ್ಕೆ ಹರ ಸಾಹಸ ಮಾಡುತ್ತಿದ್ದಾರೆ. ಸಂಜೆಯಾದರೂ ನೀರಿನ ಪ್ರಮಾಣ ಕಡಿಮೆಯಾಗಿರಲಿಲ್ಲ.
ಹೊಸಕೊಪ್ಪದ ಅಲೆಮನೆ ಕೆರೆ ಒಡೆದು ನೂರಾರು ಎಕರೆ ಭತ್ತದ ಬೇಳೆ ನಾಶವಾಗಿದೆ. ಗುಂಡಿ ಬೈಲು ಬತ್ತದ ಗದ್ದೆಗೆ ಅಂಬ್ಲೀಗೋಳ ಡ್ಯಾಂ ಹಿನ್ನೀರು ಪ್ರದೇಶವಾಗಿದ್ದರಿಂದ ಗೌತಮಪುರ, ಕಣ್ಣೂರು, ಮದ್ಯಕಣ್ಣೂರು, ನರಸಿಪುರ, ತಳಗೆರಿ ಭಾಗದಿಂದ ಆನಂದಪುರ-ಮಲಂದೂರು, ಮುರುಘಾಮಠ, ದಾಸಕೊಪ್ಪ, ಯಡೇಹಳ್ಳಿ. ಆಚಾಪುರ ಈ ಭಾಗದ 2-3 ಸಾವಿರ ಎಕರೆ ಬತ್ತದ ಗದ್ದೆಯಲ್ಲಿ ಹೀನ್ನಿರು ನಿಂತಿದೆ.

ಫ್ರೆಶ್ ನ್ಯೂಸ್

Latest Posts

Featured Videos