ರಾಂಚಿ, ಅ. 20 : ಆಕರ್ಷಕ ಹೊಡೆತಗಳ ಸರದಾರನೆಂದೇ ಬಿಂಬಿತವಾಗಿರುವ ರಹಾನೆ ಈ ಶತಕಕ್ಕಾಗಿ ಮೂರು ವರ್ಷ ಕಾಯಬೇಕಾಗಿತ್ತು. ಇಲ್ಲಿ ನಡೆಯುತ್ತಿರುವ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ಶತಕ ಸಿಡಿಸಿದ್ದಾರೆ.
ಮೊದಲನೆ ದಿನದಾಟದಲ್ಲಿ ರೋಹಿತ್ಶರ್ಮ ಜತೆಗೂಡಿ ತಾಳ್ಮೆಯಿಂದಲೇ ಬ್ಯಾಟ್ ಬೀಸಿ ತಂಡಕ್ಕೆ ಆಸರೆಯಾಗಿದ್ದ ರಹಾನೆ ಇಂದು ಭೋಜನ ವಿರಾಮಕ್ಕೂ ಮುನ್ನವೇ ಶತಕ ಸಿಡಿಸಿ ಭಾರತದ ಪಾಳಯದಲ್ಲಿ ಸಂತಸ ಮೂಡಿಸಿದ್ದಾರೆ.