ಸ್ಟಾರ್ ಸಿಂಗರ್ ರಾನು ರಾಜ್ಯಕ್ಕೆ ಎಂಟ್ರಿ..!

ಸ್ಟಾರ್ ಸಿಂಗರ್ ರಾನು  ರಾಜ್ಯಕ್ಕೆ ಎಂಟ್ರಿ..!

ಮೈಸೂರು, ಸೆ. 28 : ವಿಶ್ವವಿಖ್ಯಾತ ಮೈಸೂರು ದಸರಾ ಇನ್ನೇನು ಕ್ಷಣ ದಿನಗಳೇ ಇರುವಾಗ, ದಸರಾ ಹಬ್ಬಕ್ಕೆ ಜನರನ್ನು ರಂಜಿಸಲು ರಾನು ಮೊಂಡಲ್ ಅವರು ಬರಲಿದ್ದಾರೆ.
ಉದ್ಘಾಟನೆ ದಿನವೇ ಬರಲಿರುವ ರಾನು ಮೊಂಡಲ್ ಅವರು, ಯುವ ದಸರಾದಲ್ಲಿ ಕಾರ್ಯಕ್ರಮದಲ್ಲಿ ಹಾಡಲಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಮುಂಬೈನ ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ರಾನು ಮೊಂಡಲ್ ಅವರು ತೇರಿಮೇರಿ ಹಾಡನ್ನು ಹಾಡುವುದರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ಜನಮೆಚ್ಚುಗೆ ಪಡೆದಿದ್ದರು. ನಂತರ ಹಿಮೇಶ್ ರೆಶಮಿಯಾ ಅವರ ಚಿತ್ರಕ್ಕೆ ಗಾಯಕಿಯಾಗಿದ್ದರು. ಸದ್ಯ ರಾನು ಮೊಂಡಲ್ ಬಾಲಿವುಡ್ ಚಿತ್ರಗಳಿಗೆ ಹಾಡುಗಾರ್ತಿಯಾಗಿರುವ ಇವರು, ಯುವಜನತೆಗೆ ಸಾಧನೆಯ ಸಂದೇಶ ಸಾರುವ ಸಲುವಾಗಿ ರಾನುಮೊಂಡಲ್ಗೆ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ. ಇದೇ ವೇಳೆಯಲ್ಲಿ ಯುವದಸರಾ ವೇದಿಕೆಯಲ್ಲಿ ರಾಣುಮೊಂಡಲ್ ಅವರನ್ನು ಸನ್ಮಾನಿಸಲಿದ್ದಾರೆ. ಯುವದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಆಗಮಿಸಲಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos