ರಾಮನ ಪಾತ್ರಕ್ಕಾಗಿ ಮಾಂಸ ಮತ್ತು ಮದ್ಯ ತ್ಯಜಿಸಿದ ರಣಬೀರ್‌ ಕಪೂರ್‌!

ರಾಮನ ಪಾತ್ರಕ್ಕಾಗಿ ಮಾಂಸ ಮತ್ತು ಮದ್ಯ ತ್ಯಜಿಸಿದ ರಣಬೀರ್‌ ಕಪೂರ್‌!

ಬೆಂಗಳೂರು: ಕಲಾವಿದರು ಅಂದರೆ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಲು ತಯಾರಿರಬೇಕು. ಸಿನಿಮಾಗಾಗಿ ಹಲವಾರು ನಟರು ತಮ್ಮ ಲೈಫ್‌ ಸ್ಟೈಲ್‌ ಚೇಂಜ್‌ ಮಾಡಿಕೊಳ್ಳಬೇಕಾಗುತ್ತದೆ. ಅದೇ ರೀತಿ ಇಲ್ಲಿ ಬಾಲಿವುಡ್‌ ನಟ ತಮ್ಮ ಚಿತ್ರಕ್ಕಾಗಿ ಮದ್ಯಪಾನ ಹಾಗೂ ಮಾಂಸ ಸೇವನೆ ಬಿಟ್ಟಿದ್ದಾರಂತೆ. ಸಿನಿಮಾ ಕಲಾವಿದರು ತಮ್ಮ ಚಿತ್ರಕ್ಕಾಗಿ ಸಾಕಷ್ಟು ಕಸರತ್ತುಗಳನ್ನು ಮಾಡುತ್ತಾರೆ. ಎಷ್ಟೋ ನಟರು ತಮ್ಮ ಜೀವನಶೈಲಿಯನ್ನೇ ಬದಲಾಯಿಸಿಕೊಳ್ಳುತ್ತಾರೆ.
ಅದೇ ರೀತಿ ಪೌರಾಣಿಕ ಸಿನಿಮಾಗಳಿಗೆ ಸಹ ಹೆಚ್ಚಾಗಿ ತಯಾರಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಕುದುರೆ ಸವಾರಿ, ಕತ್ತಿ ವರ್ಸೆ, ಡೈಲಾಗ್‌ಗಳನ್ನು ಪೌರಾಣಿಕ ಶೈಲಿಯಲ್ಲಿ ಮಾತನಾಡುವುದನ್ನು, ಮ್ಯಾನೆರಿಸಂ ಹೀಗೆ ಹಲವಾರು ವಿಷಯಗಳ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವುದು, ಕಲಿಯುವುದು ತುಂಬಾನೆ ಇರುತ್ತದೆ. ಅದೇ ರೀತಿ ನಟ ರಣಬೀರ್‌ ಕಪೂರ್‌ ತಮ್ಮ ಅನಿಮಲ್‌ ಸಿನಿಮಾ ಬಿಡುಗಡೆ ಕೆಲಸಗಳ ಜೊತೆ ನೆಕ್ಸ್ಟ್‌ ಪ್ರಾಜೆಕ್ಟ್‌ ರಾಮಾಯಣ್‌ ಚಿತ್ರಕ್ಕಾಗಿ ಸಜ್ಜಾಗುತ್ತಿದ್ದಾರೆ.
ನಟ ರಣಬೀರ್‌ ಕಪೂರ್‌ ತಮ್ಮ ರಾಮಾಯಣ್‌ ಸಿನಿಮಾಗಾಗಿ ಮದ್ಯಪಾನ ಹಾಗು ಮಾಂಸ ಸೇವನೆಯನ್ನು ಬಿಟ್ಟಿದ್ದಾರೆಯಂತೆ. ನಿರ್ದೇಶಕ ನಿತೀಶ್‌ ತಿವಾರಿ ಡೈರೆಕ್ಷನ್‌ನ ರಾಮಾಯಣ್‌ ಸಿನಿಮಾದಲ್ಲಿ ನಟ ರಣಬೀರ್‌ ರಾಮನ ಪಾತ್ರ ಮಾಡುತ್ತಿದ್ದಾರೆ. ಆದರಿಂದ ರಾಮನ ಪಾತ್ರಕ್ಕೆ ನ್ಯಾಯ ಒದಗಿಸಲು ರಣಬೀರ್‌ ಮದ್ಯಪಾನ ಹಾಗು ಮಾಂಸ ಸೇವನೆ ಮಾಡುವುದನ್ನು ತಾತ್ಕಾಲಿಕವಾಗಿ ಬಿಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos