ನಟಿಗಾಗಿ ಕಿತ್ತಾಟ ಪ್ರಕರಣ: ಇಂದು ಪೊಲೀಸ್ ವಿಚಾರಣೆಗೆ ರಾಗಿಣಿ

ನಟಿಗಾಗಿ ಕಿತ್ತಾಟ ಪ್ರಕರಣ: ಇಂದು ಪೊಲೀಸ್ ವಿಚಾರಣೆಗೆ ರಾಗಿಣಿ

ಬೆಂಗಳೂರು, ಮಾ.20, ನ್ಯೂಸ್ ಎಕ್ಸ್ ಪ್ರೆಸ್: ಆರ್.ಟಿ.ಓ. ಅಧಿಕಾರಿ ರವಿ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಸ್ಯಾಂಡಲ್‍ವುಡ್‍ ನಟಿ ರಾಗಿಣಿ ದ್ವಿವೇದಿ ಇಂದು ಪೊಲೀಸರ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಇತ್ತೀಚೆಗೆ ರೆಸಿಡೆನ್ಸಿ ರಸ್ತೆಯಲ್ಲಿರುವ ರಿಡ್ಜ್ ಕಾರ್ಲಟನ್ ಹೋಟೆಲ್‍ನಲ್ಲಿ ರಾಗಿಣಿಯ ಮಾಜಿ ಗೆಳೆಯ ಶಿವಪ್ರಕಾಶ್‍ ಮತ್ತು ಹಾಲಿ ಗೆಳೆಯ ರವಿಶಂಕರ್ ನಡುವೆ ಗಲಾಟೆ ನಡೆದಿತ್ತು. ಶಿವಪ್ರಕಾಶ್ ಬಿಯರ್ ಬಾಟಲಿಯಿಂದ ರವಿ ತಲೆಗೆ ಹೊಡೆದಿದ್ರು.

ಈ ಸಂಬಂಧ ಅಶೋಕ್ ನಗರ ಪೊಲೀಸರು ಕೇಸ್‍ ದಾಖಲಿಸಿಕೊಂಡು, ವಿಚಾರಣೆಗೆ ಹಾಜರಾಗುವಂತೆ ರಾಗಿಣಿಯವರಿಗೆ ನೋಟಿಸ್‍ ನೀಡಿದ್ದು, ಈ ಹಿನ್ನೆಲೆಯಲ್ಲಿ ಇವತ್ತು ಪೊಲೀಸ್ ಠಾಣೆಗೆ ಹಾಜರಾಗಿ ರಾಗಿಣಿ ವಿವರಣೆ ನೀಡಲಿದ್ದಾರೆನ್ನಲಾಗಿದೆ.

ಮೊನ್ನೆಯಷ್ಟೇ ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಅಂತಾ ತಮ್ಮ ಫೇಸ್‍ ಬುಕ್‍ ಖಾತೆಯಲ್ಲಿ ನಟಿ ರಾಗಿಣಿ ಬರೆದುಕೊಂಡಿದ್ರು.

ಫ್ರೆಶ್ ನ್ಯೂಸ್

Latest Posts

Featured Videos