ಅಕ್ರಮ ಕಲ್ಲುಗಣಿಗಾರಿಕೆ ತಡೆದ ತಹಸೀಲ್ದಾರ್.!

ಅಕ್ರಮ ಕಲ್ಲುಗಣಿಗಾರಿಕೆ ತಡೆದ ತಹಸೀಲ್ದಾರ್.!

ಶಿವಮೊಗ್ಗ, ಮೇ. 2, ನ್ಯೂಸ್ ಎಕ್ಸ್ ಪ್ರೆಸ್: ಶಿವಮೊಗ್ಗ ತಹಸೀಲ್ದಾರರೋಬ್ಬರು ಮಾರುವೇಷದಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ಬಂದು ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಗಲ್ಲುಗಣಿ ಪ್ರದೇಶದ ಮೇಲೆ ದಾಳಿ ನಡೆಸಿದ ಘಟನೆ ನಗರ ಹೊರವಲಯದ ಗೆಜ್ಜೇನಹಳ್ಳಿಯಲ್ಲಿ ನಡೆದಿದೆ.

ಗೆಜ್ಜೇನಹಳ್ಳಿ ಭಾಗದ ಜನರು ಅಕ್ರಮ ಕಲ್ಲು ಗಣಿಗಾರಿಕೆಯಿಂದಾಗಿ ಬೇಸತ್ತಿದ್ದರು. ಅಷ್ಟೇ ಅಲ್ಲ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದರೆ ಎಲ್ಲಿ ನಮ್ಮ ಜೀವಕ್ಕೆ ಕುತ್ತು ಬರುವುದೋ ಎಂಬ ಹೆದರಿಕೆ ಅನುಭವಿಸುತ್ತಿದ್ದರು. ಆದರೆ, ಕೆಲ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಮಾರುವೇಷದಲ್ಲಿ ಸಾಮಾನ್ಯರಂತೆ ತಹಸೀಲ್ದಾರ್ ಬಿ.ಎನ್.ಗಿರೀಶ್ ಮತ್ತವರ ತಂಡ ದಾಳಿ ನಡೆಸಿದೆ. ದಾಳಿ ವೇಳೆ ಗಣಿಗಾರಿಕೆಗೆ ಬಳಸುತ್ತಿದ್ದ 2 ಟ್ರ್ಯಾಕ್ಟರ್ ಮತ್ತು 1 ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos