ಚುನಾವಣೆ ಮುಂದೂಡಿಕೆ

ಚುನಾವಣೆ ಮುಂದೂಡಿಕೆ

ಬೆಂಗಳೂರು, ಡಿ. 30: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 12 ಸ್ಥಾಯಿ ಸಮಿತಿ ಸ್ಥಾನಗಳ ಚುನಾವಣೆ ಇಂದು ಬಿಬಿಎಂಪಿ ಕೆಂಪೇಗೌಡ ಪೌರ ಸಭಾಂಗಣದಲ್ಲಿ ನಿಗದಿಯಾಗಿತ್ತು.

ನಾಮಪತ್ರ ಸಲ್ಲಿಸಲು ಬೆಳಿಗ್ಗೆ 8 ರಿಂದ 9.30 ರವರೆಗೆ ಸದಸ್ಯರಿಗೆ ಅವಕಾಶ ಕಲ್ಪಿಸಲಾಗಿತ್ತು. ನಿಗಧಿತ ಅವಧಿಯಲ್ಲಿ ಯಾವ  ಸದಸ್ಯರೂ ನಾಮಪತ್ರ ಸಲ್ಲಸಲಿಲ್ಲ ಎಂದು ಪಾಲಿಕೆ ಅಪರ ಆಯುಕ್ತರು ಸ್ಪಷ್ಟ ಪಡಿಸಿದರು.

ನಂತರ ಬೆಳಿಗ್ಗೆ 11.30ರ ಸಭೆಯಲ್ಲಿ  ಬೆಂಗಳೂರು ಪ್ರಾದೇಶಿಕ ಆಯುಕ್ತರು(ಪ್ರ) ಆದ ತುಷಾರ್ ಗಿರಿನಾಥ್ ಮಾತನಾಡಿ ಒಟ್ಟು ಸದಸ್ಯರ ಸಂಖ್ಯೆಯ ಮೂರಕ್ಕೆ ಒಂದರಷ್ಟು ಕೋರಮ್ ಇಲ್ಲದ ಹಾಗೂ ಯಾವ ಸದಸ್ಯರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣೆ ಮುಂದೂಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಇದ್ದರು

ಫ್ರೆಶ್ ನ್ಯೂಸ್

Latest Posts

Featured Videos