ಕಾಫಿನಾಡಲ್ಲಿ ಸಂಸದ ‘ತೇಜಸ್ವಿ ಸೂರ್ಯ’ ಪರದಾಟ

ಕಾಫಿನಾಡಲ್ಲಿ ಸಂಸದ ‘ತೇಜಸ್ವಿ ಸೂರ್ಯ’ ಪರದಾಟ

ಚಿಕ್ಕಮಗಳೂರು: ಬಾಳೆಹೊನ್ನೂರಿನ ಕಣತಿ ಬಳಿ ಬೃಹತ್ ಮರ ರಸ್ತೆಗೆ ಬಿದ್ದಿದೆ. ಇದರಿಂದ ಬಾಳೆಹೊನ್ನೂರು-ಚಿಕ್ಕಮಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಈ ವೇಳೆ ಶೃಂಗೇರಿಯಿಂದ ಬೇಲೂರು ಕಡೆಗೆ ಹೋಗುತ್ತಿದ್ದ ನೂತನ ಸಂಸದ ತೇಜಸ್ವಿ ಸೂರ್ಯ ಟ್ರಾಫಿಕ್ ಜಾಮ್‍ನಲ್ಲಿ ಪರದಾಡುವಂತಾಯಿತು. ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಜೋರಾಗಿದೆ. ಬಾಳೆಹೊನ್ನುರು ಸೇರಿ ಸುತ್ತಮುತ್ತಲೂ ನಾನಾ ಕಡೆ  ಧಾರಾಕಾರ ಮಳೆಯಾಗುತ್ತಿದೆ. ಮರ ಬಿದ್ದು ಒಂದು ಗಂಟೆಯಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ಸ್ಥಳೀಯರು ಹಾಗೂ ಅರಣ್ಯ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ಮಾಡಿದರು. ಮರ ತೆರವು ಕಾರ್ಯ ಪೂರ್ಣಗೊಂಡ ನಂತರ ತೇಜಸ್ವಿ ಸೂರ್ಯ ಬೇಲೂರಿನ ಕಡೆ ಪಯಣ ಬೆಳೆಸಿದರು.

ಫ್ರೆಶ್ ನ್ಯೂಸ್

Latest Posts

Featured Videos