ನವದೆಹಲಿ, ಮಾ.16, ನ್ಯೂಸ್ ಎಕ್ಸ್ ಪ್ರೆಸ್: ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಸೇರಿ ಹಲವು ಸಾಧಕರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪದ್ಮ ಪ್ರಶಸ್ತಿಗಳನ್ನು ಪ್ರದಾನಿಸಿದರು.
ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ರಿಗೆ ಪದ್ಮ ಶ್ರೀ, ಇಸ್ರೋ ವಿಜ್ಞಾನಿ ನಂಬಿ ನಾರಾಯಣ್ ರಿಗೆ ಪದ್ಮ ಭೂಷಣ, ಹರ್ವಿಂದರ್ ಸಿಂಗ್ ಫೂಲ್ಕಾರಿಗೆ ಪದ್ಮ ಶ್ರೀ, ಬಚೇಂದ್ರಿ ಪಾಲ್ ರಿಗೆ ಪದ್ಮ ಭೂಷಣ, ಸಾಲುಮರದ ತಿಮ್ಮಕ್ಕರಿಗೆ ಪದ್ಮ ಶ್ರೀ ಸೇರಿದಂತೆ ಹಲವು ಸಾಧಕರನ್ನು ಪುರಸ್ಕರಿಸಲಾಯಿತು.