ನಂದಿ ಮೂರ್ತಿ ಪ್ರತಿಷ್ಠಾಪನೆ

ನಂದಿ ಮೂರ್ತಿ ಪ್ರತಿಷ್ಠಾಪನೆ

ಬೇಲೂರು: ಪ್ರಸಿದ್ಧ ವಿಷ್ಣುಸಮುದ್ರ ಕೆರೆಯ ದಂಡೆಯ ಮೇಲೆ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀಅಮೃತೇಶ್ವರ ದೇಗುಲದ ಕಾಮಗಾರಿ ಬಿರುಸಿನಿಂದ ಸಾಗುತ್ತಿದ್ದು ನಂದಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ದೇಗುಲದ ಹೊರಗೋಡೆ ನಿರ್ಮಿಸುವ ಮುನ್ನವೆ ಭಾರಿ ಗಾತ್ರದ ಈ ನಂದೀಶ್ವರ ವಿಗ್ರಹವನ್ನು ಅಳವಡಿಸಬೇಕಿದ್ದರಿಂದ ಕ್ರೇನ್ ಬಳಸಿ ಅರ್ಚಕರ ಸೂಚನೆಯಂತೆ ಪೀಠ ನಿರ್ಮಿಸಿ ಅದರ ಮೇಲೆ ಪ್ರತಿಷ್ಠಾಪಿಸಲಾಯಿತು. ಪ್ರತಿಷ್ಠಾಪಿಸುವುದಕ್ಕೆ ಮುನ್ನ ಪೀಠ ಅಳವಡಿಸಲು ಹಾಗೂ ನಂದಿ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ದೇಗುಲ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಶೋಕ್, ಗೌರವಾಧ್ಯಕ್ಷ ಸುಂಕದ ಧರ್ಮಣ್ಣ, ಅರ್ಚಕ ಭಾರ್ಗವ್ ಇದ್ದರು.
ದೇಗುಲ ಜೀರ್ಣೋದ್ಧಾರ ಕಾರ್ಯದಲ್ಲಿ ಸ್ಥಳೀಯ ದೇಗುಲ ಸಮಿತಿಯವರು ಹೆಚ್ಚಿನ ಆಸಕ್ತಿ ವಹಿಸಿದ್ದರು ಶೀಘ್ರವೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಂಬಿಕೆಯಿದೆ ಎಂದು ಅಧ್ಯಕ್ಷ ಅಶೋಕ್ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos