ನಾನು ಯಾರನ್ನು ಮಂತ್ರಿಗಿರಿ ಕೊಡಿ ಎಂದು ಸಲ್ಂ ಹೊಡೆಯಲ್ಲ

ನಾನು ಯಾರನ್ನು ಮಂತ್ರಿಗಿರಿ ಕೊಡಿ ಎಂದು ಸಲ್ಂ ಹೊಡೆಯಲ್ಲ

ಬಾಗಲಕೋಟೆ ,ಆ .22 : ನನ್ನನ್ನು ಮಂತ್ರಿಗಿರಿ ಮಾಡಿ ಎಂದು ಯಾರನ್ನು ನಾನು ಸಲ್ಂ ಹೊಡೆಯಲ್ಲ. ಯಾರ ಮನೆಮುಂದೆ ನಿಲ್ಲುವುದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಡಿ-ಬೇಡಿ, ಕೈ-ಕಾಲು ಹಿಡಿದು ಮಂತ್ರಿಯಾಗುಷ್ಟು ಕೆಳ ರಾಜಕಾರಣ ಮಾಡುವ ವ್ಯಕ್ತಿ ನಾನಲ್ಲ. ಯಡಿಯೂರಪ್ಪ ಅವರಿಗೂ ಒತ್ತಡ ಹಾಕಿಲ್ಲ.
ಮುಂದಿನ ಸಂಪುಟ ವಿಸ್ತರಣೆ ವೇಳೆಯೂ ನಾನು ಒತ್ತಾಯ ಮಾಡಲ್ಲ.
ಸ್ವಾಮೀಜಿಗಳ ಮೂಲಕ ಬಿಎಸ್ವೈಗೆ ಒತ್ತಡ ಹಾಕಿಸಿಲ್ಲ. ಯಾರ ಮನೆಗೂ ಹೋಗಿ ನನ್ನ ಮಂತ್ರಿ ಮಾಡಿ ಎಂದು ಕೇಳಲ್ಲ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos