ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಲ್ಯಾಣ ವಿಭಾಗದಡಿ ಕೈಗೆತ್ತಿಕೊಳ್ಳುವ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಸಂಬಂಧ, ಇಂದು ಮಾನ್ಯ ಆಡಳಿತಗಾರರು ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ವಿಶೇಷ ಆಯುಕ್ತರು ಶ್ರೀ ಜೆ.ಮಂಜುನಾಥ್, ಸಹಾಯಕ ಆಯುಕ್ತರು(ಕಲ್ಯಾಣ) ಶ್ರೀ ಸೋಮಪ್ಪ ಕಡಕೋಳ್, ಎಲ್ಲಾ ವಲಯದ ಕಲ್ಯಾಣಾಧಿಕಾರಿಗಳು ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಪಾಲಿಕೆಯ ಕಲ್ಯಾಣ ವಿಭಾಗದಡಿ ಆಯವ್ಯಯದಲ್ಲಿ ಎಷ್ಟು ಕ್ರಿಯಾಯೋಜನೆ ರೂಪಿಸಲಾಗಿದೆ, ಯಾವ್ಯಾವ ಯೋಜನೆಗಳನ್ನು ರೂಪಿಸಲಾಗಿದೆ, ಯಾವ ಕಾರ್ಯಕ್ರಮಕ್ಕೆ ಎಷ್ಟು ಅನುದಾನ ಮೀಸಲಿಡಲಾಗಿದೆ, ವಾರ್ಷಿಕ ಎಷ್ಟು ಅನುದಾನ ವ್ಯಯವಾಗುತ್ತಿದೆ, ಇದುವರುವಿಗೆ ಎಷ್ಟು ಅನುದಾನ ವ್ಯಯಿಸಲಾಗಿದೆ, ಎಷ್ಟು ಮಂದಿ ಇದರ ಸದುಪಯೋಗ ಪಡೆಸಿಕೊಂಡಿದ್ದಾರೆ ಎಂಬುದರ ಸಮರ್ಪಕ ಮಾಹಿತಿಯನ್ನು ಒದಗಿಸಲು ಅಧಿಕಾರಿಗಳು ವಿಫಲವಾಗಿರುವುದನ್ನು ಗಮನಿಸಿದ ಆಡಳಿತಗಾರರು ಈ ಬಗ್ಗೆ ಪೂರ್ಣ ಕ್ರಿಯಾಯೋಜನೆಯ ಪಟ್ಟಿಯನ್ನು ಕೂಡಲೇ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.