ಮಂಜೇಶ್ವರದ ಮೂವರ ದುರ್ಮರಣ

ಮಂಜೇಶ್ವರದ ಮೂವರ ದುರ್ಮರಣ

ಮಂಜೇಶ್ವರ, ಜ 9 : ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಗುರುವಾರ ನಸುಕಿನ ವೇಳೆ ಸಂಭವಿಸಿದ ಭೀಕರ ವಾಹನ ಅಪಘಾತದಲ್ಲಿ ಕಾಸರಗೋಡು ಮೂಲದ ಮೂವರು ದುರ್ಮರಣಗೊಂಡ ವಿದ್ರಾವಕ ಘಟನೆ ನಡೆದಿದೆ.
ಮಂಜೇಶ್ವರ ಹೊಸಂಗಡಿ ಬಳಿಯ ಬೆಜ್ಜ ನಿವಾಸಿ, ಖಾಸಗೀ ಬಸ್ ಚಾಲಕ ಕಿಶನ್ ಬೆಜ್ಜ, ಮಂಜೇಶ್ವರ ಚರ್ಚ್ ಬಳಿಯ ನಿವಾಸಿ ಅಕ್ಷಯ್, ಅಂಗಡಿಪದವು ನಿವಾಸಿ ಮೋನಪ್ಪ ಮೇಸ್ತಿ, ದಾರುಣರಾಗಿ ಮೃತರಾದ ದುರ್ದೈವಿಗಳು.
ಇವರು ಕೆಲವು ದಿನಗಳ ಹಿಂದೆ ಶಬರಿಮಲೆ ಯಾತ್ರೆ ಪೂರೈಸಿ ಮರಳಿದ್ದರು. ಬಳಿಕ ತಿರುಪತಿ ಕ್ಷೇತ್ರ ದರ್ಶನಕ್ಕೆ ಎರಡು ದಿನಗಳ ಹಿಂದೆ ತೆರಳಿದ್ದು, ಮರಳುತ್ತಿದ್ದಾಗ ಬೆಂಗಳೂರು ಹಾಸನ ಮಧ್ಯೆ ಗುಡೇಮಾರನಹಳ್ಳಿ ಎಂಬಲ್ಲಿ ಅವರು ಸಂಚರಿಸಿದ ಝೈಲೋ ಕಾರು ರಸ್ತೆ ವಿಭಾಜಕ(ಡಿವೈಡರ್) ಗೆ ಡಿಕ್ಕಿ ಹೊಡೆದು ಅಪಘಾತ ಉಂಟಾಗಿದೆ.ಘಟನೆಯಲ್ಲಿ ಇತರ ಆರು ಮಂದಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಘಟನೆಯ ಬಗ್ಗೆ ಬೆಂಗಳೂರು ಗ್ರಾಮಾಂತರ ಠಾಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೆತ್ತಿಕೊಂಡು ಮಹಜರು ನಡೆಸಿದರು. ಮೃತದೇಹವನ್ನು ಊರಿಗೆ ಕರೆತರುವ ಯತ್ನಗಳು ಮುಂದುವರಿದಿದೆ ಎಂದು ತಿಳಿಯಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos