ನವದೆಹಲಿ, ಸೆ. 21 : ನಾನೊಬ್ಬ ‘ಉಗ್ರವಾದಿ, ಅಪಹರಣಕಾರ’ ಎಂಬಂತೆ ಶ್ರೀನಗರದಿಂದ ವಾಪಸ್ ಕಳಿಸಿದರು ಎಂದು ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಹೇಳಿದರು.
ಜಮ್ಮು ಕಾಶ್ಮೀರದ ಕೆಲ ಸ್ನೇಹಿತರನ್ನು ಭೇಟಿಯಾಗಲು ತೆರಳಿದ್ದ ತನ್ನನ್ನು ಅಲ್ಲಿನ ಆಡಳಿತ ತಾನು ‘ಅಪಹರಣಕಾರ’ ಹಾಗೂ ‘ಉಗ್ರವಾದಿ’ ಎಂಬಂತೆ ಶ್ರೀನಗರದಿಂದ ಬಲವಂತವಾಗಿ ವಾಪಸ್ ಕಳುಹಿಸಿತ್ತು.
ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಕಾಶ್ಮೀರ ಕಣಿವೆಯಲ್ಲಿ ಹಲವು ವರ್ಷಗಳಿಂದ ಶಾಂತಿಗಾಗಿ ಶ್ರಮಿಸುತ್ತಿರುವ ‘ಕನ್ಸರ್ನ್ಡ್ ಸಿಟಿಝನ್ಸ್ ಗ್ರೂಪ್’ ಜತೆ ತಾನು ಸಹಯೋಗ ಹೊಂದಿದ್ದಾಗಿಯೂ ತಿಳಿಸಿದ್ದಾರೆ. ‘’ ನಾನು ನಿಮ್ಮ ಅಭಿಮಾನಿ ಎಂದು ಅವರು ಹೇಳಿದಾಗ ಏನೋ ತಪ್ಪಾಗಿದೆ ಎಂದು ಅರಿತೆ. ಇತರರು ಕಾಶ್ಮೀರಕ್ಕೆ ಹೋಗಬಹುದು ಆದರೆ ನಿಮ್ಮನ್ನು ಅನುಮತಿಸಲಾಗದು ಎಂದು ಆತ ಹೇಳಿದರು” ಎಂದು ಸಿನ್ಹಾ ವಿವರಿಸಿದ್ದಾರೆ.