ಸುನಿಲ್ ಬೋಸ್ ಪರ ಪ್ರಚಾರ ಮಾಡಿದ ಮಾದೇವಪ್ಪ

ಸುನಿಲ್ ಬೋಸ್ ಪರ ಪ್ರಚಾರ ಮಾಡಿದ ಮಾದೇವಪ್ಪ

ಚಾಮರಾಜನಗರ: ಲೋಕಸಭಾ ಚುನಾವಣೆ ರಾಜ್ಯದಲ್ಲೇ ದಿನದಿಂದ ದಿನಕ್ಕೆ ಬಿಸಿ ಹೆಚ್ಚುತ್ತಿದೆ. ರಾಜ್ಯದಲ್ಲೇ ಅಭ್ಯರ್ಥಿಗಳು ಭರ್ಜರಿ ಮತಯಾಚನೆ ಮಾಡುತ್ತಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅವರ ಪರವಾಗಿ ಹಲವಾರು ನಾಯಕರು ಹನೂರು ವಿಧಾನಸಭಾ ಕ್ಷೇತ್ರದ ಮಧುವನಹಳ್ಳಿಯಲ್ಲಿ ಕಾಂಗ್ರೆಸ್‌ನ ಹಲವಾರು ನಾಯಕರು ಭರ್ಜರಿ ಮತ ಪ್ರಚಾರ ಮಾಡುತ್ತಿದ್ದಾರೆ.

ಬಿಜೆಪಿ ಪಕ್ಷದ ಆಡಳಿತದಿಂದ ಕಳೆದ ಹತ್ತು ವರ್ಷದಿಂದ ಬೇಸತ್ತಿರುವ ಜನರಿಗೆ ಹೊಸ ಬದಲಾವಣೆ ಬೇಕಾಗಿದೆ. ಹಾಗಾಗಿ ಅತ್ಯುತ್ತಮ ನಾಯಕನನ್ನು ಆಯ್ಕೆ ಮಾಡುವ ಸಮಯ ಬಂದಿದೆ. ಈ ಸಂದರ್ಭದಲ್ಲಿ ಸಚಿವ ಮಾದೇವಪ್ಪ ನಿಮ್ಮ ಮತ ನೀಡಿ ಎಂದು ಮನವಿ ಮಾಡಿದರು.

ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರು ಬದುಕಲು ಸಾಧ್ಯವಾಗದ ರೀತಿಯಲ್ಲಿ ಬಿಜೆಪಿಯರು ಮಾಡಿದ್ದಾರೆ. ಹಿಂದುಳಿದವರ, ದಲಿತರ, ಮಹಿಳೆಯರ, ರೈತರ, ಕಾರ್ಮಿಕರ ಪರವಾಗಿ ನಿಲ್ಲದೇ ಶ್ರೀಮಂತ ಹಾಗೂ ಕಾರ್ಮಿಕರ ಪರ ಬಿಜೆಪಿಗರು ನಿಂತಿದ್ದಾರೆ. ಬಡವರು, ಹಳ್ಳಿಗಳು ಬಿಜೆಪಿಗರಿಗೆ ಕಾಣ್ಣಿಗೆ ಕಾಣುವುದಿಲ್ಲಾ.

ಇಂದಿರಾ ಗಾಂಧಿಯವರು ಅವರ ಆಡಳಿತವಿದ್ದಾಗಲೇ ದೇಶದಲ್ಲಿರುವ ಬಡತನ ನಿರ್ಮೂಲನೆ ಯಾಗಬೇಕೆಂದು ಹೋರಾಡಿದರು. ಆದರೆ ಬಿಜೆಪಿಯವರು ಬಡವರನ್ನು ಲೆಕ್ಕಿಸದೆ ಕೇವಲ ಶ್ರೀಮಂತರ ಪರವಾಗಿ ಆಡಳಿತ ನಡೆಸುತ್ತಿದ್ದಾರೆ. ಹಿಂದುಳಿದ ಜನತೆಗೆಲ್ಲ ಮೀಸಲಾತಿ ಕೊಡಬೇಕೆಂದು ಮಂಡಲ ಕಮಿಟಿ ಜಾರಿಯಾಯಿತು. ಆದರೆ ಬಿಜೆಪಿಯವರು ಮಂಡಲ ಕಮಿಟಿ ಬೇಡ ಎಂದು ಆ ಕಾಲದಲ್ಲಿಯೋ ಹೋರಾಟ ಮಾಡಿದ್ದಾರೆ ಎಂದು ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos