ಮಚ್ಚೇಶ್ವರ ಯಾರು?

ಮಚ್ಚೇಶ್ವರ ಯಾರು?

ಚಿಕ್ಕಮಗಳೂರು, ಜು. 24 : ಮಚ್ಚೇಶ್ವರ ಯಾರು, ಎಲ್ಲಿಗೆ ಹೋದ, ವಿಳಾಸವೇನು ಅನ್ನೋದು ಗೊತ್ತಾಗದೇ ಪೊಲೀಸರಿಗೆ ತಲೆನೋವು ಶುರುವಾಗಿದೆ. ಪಟ್ಟಣದ ಬಸ್ ನಿಲ್ದಾಣ ಆವರಣದಲ್ಲಿ ವ್ಯಕ್ತಿಯೊಬ್ಬ ಮಚ್ಚು ಹಿಡಿದು ಬಹಿರಂಗವಾಗಿ ಓಡಾಡುತ್ತ ಸಾರ್ವಜನಿಕರಲ್ಲಿ ಆತಂಕ. ಇಲ್ಲಿನ ಮುಖ್ಯ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ರೋಟರಿ ಸಂಸ್ಥೆಯವರು ಅಳವಡಿಸಿದ ಸಿ.ಸಿ. ಕ್ಯಾಮರಾದಲ್ಲಿ ಮಚ್ಚುಧಾರಿ ಸಂಚಾರದ ದೃಶ್ಯಗಳು ಸೆರೆಯಾಗಿದ್ದು, ಸಾಮಾಜಿಕ ಜಾಲಾತಾಣದಲ್ಲಿ ದೃಶ್ಯಗಳು ವೈರಲ್ ಆಗಿದೆ.
ವ್ಯಕ್ತಿ ನರಸಿಂಹರಾಜಪುರ ಭಾಗದವನಾಗಿದ್ದು, ಕೊಪ್ಪ ತಾಲೂಕಿನ ಬೋಳಾಪುರದ ಕರಿಹಕ್ಲು ಗ್ರಾಮದಲ್ಲಿ ಈತನ ಅಜ್ಜಿ ಮನೆಗೆ ಬಂದುಹೋಗುತ್ತಿದ್ದ ಎಂಬ ಮಾಹಿತಿ ಇದೆ. ಈ ಆಧಾರದಲ್ಲಿ ಪರಿಶೀಲನೆಗೆ ಹೋದಾಗ ಈತ ಮನೆಯಲ್ಲಿಲ್ಲದೇ ಅಜ್ಜಿ ಮನೆಯಲ್ಲಿದ್ದ ಈತನ ತಮ್ಮನನ್ನು ಕರೆತಂದು ವಿಚಾರಣೆ ನಡೆಸಲಾಯಿತು. ಈತನಿಗೆ ಯಾವುದೇ ಮಾಹಿತಿ ತಿಳಿದಿಲ್ಲ ಎಂದು ಗೊತ್ತಾಗಿದೆ. ಬಳಿಕ ಆತನನ್ನು ಕಳುಹಿಸಿದ ಪೊಲೀಸರು ಮಚ್ಚು ಹಿಡಿದು ಓಡಾಡಿದ ವ್ಯಕ್ತಿಯ ಸುಳಿವು ಪತ್ತೆಹಚ್ಚಲು ಗಸ್ತು ತಿರುಗುತ್ತಿದ್ದಾರೆ. ಆತನ ಮೊಬೈಲ್ ನಂಬರ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಸುದ್ಧಿಗಳು ಹಬ್ಬುತ್ತಿವೆ.

ಫ್ರೆಶ್ ನ್ಯೂಸ್

Latest Posts

Featured Videos