ಹುಬ್ಬಳ್ಳಿ, ಜ. 06: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ತನ್ನ ಸಹೋದರನಿಗೆ ಚಾಕು ಇರಿದ ಘಟನೆ ಕೋಟಿಲಿಂ ಗನಗರಲ್ಲಿ ನಡೆದಿದೆ.
ಕೋಟಿಲಿಂಗನಗರದ ರಾಜೇಶ ಕಲ್ಲಪ್ಪ ಹೊಸಮನಿ ಎಂಬುವವರು ಚಾಕು ಇರಿತಕ್ಕೆ ಒಳಗಾಗಿದ್ದು, ರಾಜೇಶ ಸಹೋದರ ಸತೀಶ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಚಾಕು ಇರಿದಿದ್ದಾನೆ. ನಿನ್ನೆ ಮಧ್ಯಾಹ್ನ ಸತೀಶ್ ರಾಜೇಂದ್ರ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವಾಗ ರಾಜೇಂದ್ರ ಮಧ್ಯಪ್ರವೇಶಿಸಿದಾಗ ಸತೀಶ್ ರಾಜೇಂದ್ರನಿಗೆ ಚಾಕುದಿಂದ ಇರಿದಿದ್ದಾನೆ. ಇದರಿಂದಾಗಿ ರಾಜೇಂದ್ರನಿಗೆ ಬಲಗೈ ಮತ್ತು ಎಡಗೈಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.