ಬೆಂಗಳೂರು, ಡಿ. 17 : ವಿರೋಧ ಮಾಡುವುದು ನಾವು, ಭಾಷಣ ಮಾಡುವುದು ನಾವು, ವಿರೋಧ ಕಟ್ಕೊಳ್ಳೋದು ನಾವು. ಆದರೆ ಅಧಿಕಾರ ಅನುಭವಿಸೋದಕ್ಕೆ ಖುರ್ಚಿ ಮೇಲೆ ಕೂರುವುದಕ್ಕೆ ಬೇರೆಯವರಾ? ಹೀಗೆಂದು ಪ್ರಶ್ನಿಸಿದವರು ಕಾಂಗ್ರೆಸ್ ನಾಯಕ ಸಿ ಎಂ ಇಬ್ರಾಹಿಂ.
ಪಕ್ಷದ ನಾಯಕರ ವಿರುದ್ಧ ಹರಿಹಾಯ್ದ ಅವರು, ಸತ್ತಿದ್ದೀವಿ ಅಂದಮೇಲೆ ಶವ ಸಂಸ್ಕಾರನಾದರೂ ಮಾಡಬೇಕಲ್ಲ, ಶವ ಸಂಸ್ಕಾರವೂ ಮಾಡದೇ ಸರ್ಕಲ್ ನಲ್ಲಿ ಶವ ಬಿಸಾಡಿ ಹೋದರೆ? ಅದಕ್ಕಿಂತ ಮನೆ ಸಾವೇ ಬೆಸ್ಟು ಅನಿಸುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹೈಕಮಾಂಡ್ ಅಲ್ಪ ಸಂಖ್ಯಾತ ಸಮುದಾಯದ ಕೈ ಹಿಡಿಲಿಲ್ಲ. ವೇಣುಗೋಪಾಲ್ ನಮ್ಮ ಪರವಾಗಿ ಮಾತನಾಡಬಹುದಿತ್ತು. ಕಾಂಗ್ರೆಸ್ ನಾಯಕರೂ ಯಾರೂ ಮಾತನಾಡಲೇ ಇಲ್ಲ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ವಿರುದ್ದ ನನ್ನ ಸಿಟ್ಟಲ್ಲ, ಕಾಂಗ್ರೆಸ್ ಪಕ್ಷದ ವಿರುದ್ದ ನನ್ನ ಸಿಟ್ಟು ಎಂದು ತಮ್ಮ ಅಸಮಧಾನ ವ್ಯಕ್ತಪಡಿಸಿದರು.