ಉರುಳಿಗೆ ಬಿದ್ದದ್ದು ಕಾಡುಹಂದಿಯಲ್ಲ, ಚಿರತೆ..!

ಉರುಳಿಗೆ ಬಿದ್ದದ್ದು ಕಾಡುಹಂದಿಯಲ್ಲ, ಚಿರತೆ..!

ಮಂಡ್ಯ, ಏ. 29, ನ್ಯೂಸ್ ಎಕ್ಸ್ ಪ್ರೆಸ್:  ಕಾಡುಹಂದಿ ಹಿಡಿಯಲೆಂದು ಹಾಕಿದ್ದ ಉರುಳಿಗೆ ಚಿರತೆ ಸಿಕ್ಕಿ ಬಿದ್ದ ಘಟನೆ ಮಂಡ್ಯ ತಾಲೂಕಿನ ಹಂಪಾಪುರ ಗ್ರಾಮದ ಕಬ್ಬಿನ‌ ಗದ್ದೆಯಲ್ಲಿ ನಡೆದಿದೆ. ಕಳೆದ ಒಂದು ವರ್ಷದಿಂದ ಬೋನಿಗೆ ಬೀಳದೆ ಇದ್ದ ಚಿರತೆ, ಈಗ ಉರುಳಿಗೆ ಬಿದ್ದಿದೆ. ಕಳೆದ ಒಂದು ವರ್ಷದಿಂದ ಗುನ್ನ ನಾಯಕನಹಳ್ಳಿ , ಕರಡಿ ಕೊಪ್ಪಲು, ಹಂಪಾಪುರ, ಬಿಳಿದೇಗಲು ಗ್ರಾಮಗಳ ನಡುವಿನ ಅರಣ್ಯ ಪ್ರದೇಶದಲ್ಲಿ ಚಿರತೆ ಸಂಚಾರ ಮೂಡಿಸಿತ್ತಲ್ಲದೇ, ಕೆಲವು ಸಮಯ ರೈತರ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸಿತ್ತು. ಹೀಗಾಗಿ ಚಿರತೆ ಸೆರೆಗೆ ಬೋನನ್ನು ಇರಿಸಿದ್ದರೂ ಚಿರತೆ ಸೆರೆ ಸಿಕ್ಕಿರಲಿಲ್ಲ. ಇದೀಗ ಗ್ರಾಮದ ಜೈ ಸ್ವಾಮಿ ಎಂಬುವವರ ಜಮೀನಿನಲ್ಲಿ ಚಿರತೆ ಸೆರೆ ಸಿಕ್ಕಿದ್ದು, ವಿಚಾರ ತಿಳಿಯುತ್ತಿದ್ದಂತೆ ಜನ ಸಮೂಹವೇ ಹರಿದು ಬಂದಿದೆ. ಜನರನ್ನು ನಿಯಂತ್ರಿಸಲು ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಹರ ಸಾಹಸ ಪಡಬೇಕಾಯಿತು.

ಫ್ರೆಶ್ ನ್ಯೂಸ್

Latest Posts

Featured Videos