ಬೆಂಗಳೂರು, ಮೇ.2, ನ್ಯೂಸ್ ಎಕ್ಸ್ ಪ್ರೆಸ್: ಮೊನ್ನೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಬಂತು. ಮಂಡ್ಯದ ಖಾಸಗಿ ಶಾಲೆಯ ವಿದ್ಯಾರ್ಥಿನಿ ಫೇಲ್ ಆಗಿದ್ಲು. ಇದನ್ನೇ ನೆಪವಾಗಿಟ್ಟುಕೊಂಡು ಅದೇ ಶಾಲೆಯ ಶಿಕ್ಷಕ ಆ ವಿದ್ಯಾರ್ಥಿನಿಗೆ ಐ ಲವ್ ಯು ಅಂತಾ ಹೇಳಿದ್ದಾನೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಎರಡು ವಿಷಯಗಳಲ್ಲಿ ಫೇಲಾಗಿದ್ದಳು. ವಿದ್ಯಾರ್ಥಿನಿ ಫೇಲಾಗಿದ್ದನ್ನು ತಿಳಿದ ಶಿಕ್ಷಕ ಮೇಘನಾಥ್ ಒಂದು ವಿಷಯದಲ್ಲಿ ಫೇಲಾಗಿರುವುದಾಗಿ ಹೇಳುವಂತೆ ವಿದ್ಯಾರ್ಥಿನಿಗೆ ಹೇಳಿಕೊಟ್ಟಿದ್ದಾನೆ. ಅಲ್ಲದೆ ನೋಟ್ಸ್ ಕೊಟ್ಟು ಎಕ್ಸಾಂ ಬರೆಸುವುದಾಗಿ ಕೂಡಾ ಹೇಳಿದ್ದಾನೆ. ಅಷ್ಟೇ ಅಲ್ಲದೆ ನೀನು ಬೇಜಾರಾಗಬೇಡ. ನಾಳೆ ಅಥವಾ ನಾಡಿದ್ದು ಫೋನ್ ಮಾಡ್ತಿನಿ. ಆಗ ನೀನು ಬರುವಂತೆ. ಸಂಜೆ ಸಿಗು….ಐ ಲವ್ ಯು ಕಣೋ ಎಂದು ಶಿಕ್ಷಕ ವಿದ್ಯಾರ್ಥಿನಿಗೆ ಫೋನಿನಲ್ಲಿ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಪೋಷಕರು ಶಿಕ್ಷಕ ಮೇಘನಾಥ್ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.