ಮಧ್ಯಪ್ರದೇಶ, ಮೇ. 23, ನ್ಯೂಸ್ ಎಕ್ಸ್ ಪ್ರೆಸ್: ಮಧ್ಯಪ್ರದೇಶದ ಸಿಹೋರ್ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷ ರತನ್ ಸಿಂಗ್ ಠಾಕೂರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮತ ಎಣಿಕೆ ಕೇಂದ್ರಕ್ಕೆ ರತನ್ ಸಿಂಗ್ ಬಂದಿದ್ದರು ಎನ್ನಲಾಗಿದೆ. ಮತ ಎಣಿಗೆ ವೀಕ್ಷಣೆ ಮಾಡುತ್ತಿದ್ದ ರತನ್ ಠಾಕೂರ್ ಗೆ ಹೃದಯಾಘಾತವಾಗಿದೆ. ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾರೆ.
ರತನ್ ಸಿಂಗ್ ಠಾಕೂರ್ ಸ್ನೇಹಿತರ ಜೊತೆ ಮತ ಕೇಂದ್ರಕ್ಕೆ ಬಂದಿದ್ದರಂತೆ. ಮತ ಎಣಿಕೆ ಬಗ್ಗೆ ಮಾಹಿತಿ ಪಡೆಯುತ್ತಿರುವಾಗಲೇ ಪ್ರಜ್ಞೆ ತಪ್ಪಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಆಗಲೇ ಅವರು ಸಾವನ್ನಪ್ಪಿದ್ದರು ಎಂದು ಸ್ನೇಹಿತರು ತಿಳಿಸಿದ್ದಾರೆ.