ಕಣ್ಣು ಮುಚ್ಚಿ ಕುಳಿತಿರು ಹೆಸ್ಕಾಂ

ಕಣ್ಣು ಮುಚ್ಚಿ ಕುಳಿತಿರು ಹೆಸ್ಕಾಂ

ಹುಬ್ಬಳ್ಳಿ, ಫೆ. 20: ದಿನನಿತ್ಯ ಸಾವಿರಾರು ಜನರು ಸಂಚರಿಸುವ ರಸ್ತೆಯಲ್ಲಿ ಲೈಟಿನ ಕಂಬವೊಂದು ಮುರಿದು ಬಿದ್ದಿದ್ದರೂ ಸಹ ಹೆಸ್ಕಾಂ ಅಧಿಕಾರಿಗಳು ಮಾತ್ರ ಇನ್ನೂವರೆಗೂ ಇತ್ತ ಕಡೆ ಸುಳಿದಿಲ್ಲ.

ನಗರದ  ಕೋರ್ಟ್ ಸರ್ಕಲ್ ನ ಕೆನರಾ ಹೋಟೆಲ್ ಮುಂಭಾಗದಲ್ಲಿರುವ ಲೈಟಿನ ಕಂಬ ಮುರಿದು ಪಕ್ಕದಲ್ಲೇ ಇರುವ ಟ್ರಾನ್ಸ್ ಫರ್ಮರ್ ಮೇಲೆ ವಾಲಿಕೊಂಡಿದೆ. ಸ್ಥಳಿಯರು ಮುಂಜಾನೆಯಿಂದ ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ‌

ಇಷ್ಟಾದರೂ ಸಹ ಇನ್ನೂವರೆಗೂ ಕೆ.ಇ.ಬಿ ಹಾಗೂ ಹೆಸ್ಕಾಂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಭೇಟಿ ನೀಡಿಲ್ಲ. ನಿನ್ನೆ ರಾತ್ರಿಯೇ ಲೈಟ್ ಕಂಬ ಬಿದ್ದಿದ್ದರೂ ಇನ್ನೂ ದುರಸ್ತಿ ಕಾರ್ಯ ಮಾಡದ ಕೆ.ಇ.ಬಿ ಅಧಿಕಾರಿಗಳ ಬೇಜವಾಬ್ದಾರಿಗೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಸಾವಿರಾರು ಜನರು ಓಡಾಡುವ ರಸ್ತೆ ಆಗಿರುವುದರಿಂದ  ಅಧಿಕಾರಿಗಳು ಹಾಗೂ ಪೋಲೀಸರು ಮಾತ್ರ ನಿರ್ಲಕ್ಷ್ಯ ಧೋರಣೆ ತೋರಿರುವುದು ವಿಪರ್ಯಾಸವೇ ಸರಿ.

ಫ್ರೆಶ್ ನ್ಯೂಸ್

Latest Posts

Featured Videos