ಹುತಾತ್ಮ ಯೋಧ ಗುರು ಮನೆಯಲ್ಲಿ ಹಣಕ್ಕಾಗಿ ‘ಅತ್ತೆ-ಸೊಸೆ’ ಜಗಳ.!

ಹುತಾತ್ಮ ಯೋಧ ಗುರು ಮನೆಯಲ್ಲಿ ಹಣಕ್ಕಾಗಿ ‘ಅತ್ತೆ-ಸೊಸೆ’ ಜಗಳ.!

ಮಂಡ್ಯ, ಏ. 24, ನ್ಯೂಸ್ ಎಕ್ಸ್ ಪ್ರೆಸ್: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಕುಟುಂಬದಲ್ಲಿ ಹಣಕ್ಕಾಗಿ ಅತ್ತೆ ಸೊಸೆಯರಿಬ್ಬರು ಜಗಳವಾಡಿದ್ದು, ಈಗ ಗುರು ಅವರ ಪತ್ನಿ ಕಲಾವತಿ ಅವರು ತಮ್ಮ ತವರು ಮನೆಗೆ ತೆರಳಿದ್ದಾರೆ ಎನ್ನಲಾಗಿದೆ.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಕುಟುಂಬಕ್ಕೆ ರಾಜ್ಯ ಸರಕಾರ ಸೇರಿ ಲಕ್ಷಾಂತರ ಜನರು ಹಣ ಸಹಾಯ ಮಾಡಿದ್ದರು. ಇದೇ ಹಣದ ವಿಷಯಕ್ಕಾಗಿ ಜಗಳವಾಗಿದೆ ಎನ್ನಲಾಗುತ್ತಿದೆ.

ಇನ್ನು ಪರಿಹಾರ ರೂಪದಲ್ಲಿ ಬಂದ ಚೆಕ್ ಗಳು ಕಲಾವತಿ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಸಂದಾಯವಾದರೆ, ನಗದು ರೂಪದಲ್ಲಿ ಬಂದ ಪರಿಹಾರದ ಹಣ ಗುರು ತಾಯಿ ಚಿಕ್ಕೋಳಮ್ಮ ಅವರಿಗೆ ಬಂದಿದೆ ಎನ್ನಲಾಗಿದೆ.

ಕಳೆದ ಕೆಲ ತಿಂಗಳುಗಳ ಹಿಂದೆ ಕೂಡ ಅತ್ತೆ ಚಿಕ್ಕೋಳಮ್ಮ ಹಾಗೂ ಗುರು ಪತ್ನಿ ಕಲಾವತಿ ನಡುವೆ ಹಣಕ್ಕಾಗಿ ಕಿತ್ತಾಟ ನಡೆದಿತ್ತು, ಈ ಬಗ್ಗೆ ಮಾಧ್ಯಮಗಳು ಕೂಡ ವರದಿ ಪ್ರಸಾರ ಮಾಡಿದ್ದವು. ಇನ್ನು ಕೂಡಲೇ ಸ್ಥಳೀಯ ನಾಯಕರು ಈ ಬಗ್ಗೆ ಇಬ್ಬರಿಗೂ ಎಚ್ಚರಿಕೆ ನೀಡಿ ಸುಮ್ಮನಾಗಿಸಿದ್ದರು. ಆದರೆ ದಿನ ಕಳೆದಂತೆ ಇಬ್ಬರಲ್ಲೂ ದ್ವೇಷ ಮಂಗಳವಾರ ಹೆಚ್ಚಾಗಿ ಗಲಾಟೆ ನಡೆದಿದೆ. ಗಲಾಟೆ ಬಿಡಿಸಲು ಗುರು ಸಹೋದರ ಮಧು ಯತ್ನಿಸಿದ್ದಾರೆ. ಆದರೆ ಈ ವೇಳೆ ಸಾಸಲಪುರದಿಂದ ಆಗಮಿಸಿದ ಕಲಾವತಿ ಪೋಷಕರು ಮಗಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos