ಪುಸ್ತಕ ಜೋಳಿಗೆಗೆ ಉತ್ತಮ ಸ್ಪಂದನೆ

ಪುಸ್ತಕ ಜೋಳಿಗೆಗೆ ಉತ್ತಮ ಸ್ಪಂದನೆ

ಗಂಗಾವತಿ: ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿಯಿಂದ ಪುಸ್ತಕ ಜೋಳಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರು ವಿಶ್ವನಾಥ ರೆಡ್ಡಿ ಹೊಸಮನಿ ಇವರು ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಹಾಗೂ ಓದುವ ಬೆಳಕು ಕಾರ್ಯಕ್ರಮದಡಿ ಪುಸ್ತಕ ಜೋಳಿಗೆ ಕಾರ್ಯಕ್ರಮಕ್ಕೆ ಪುಸ್ತಕವನ್ನು ಜೋಳಿಗೆಯಲ್ಲಿ ಹಾಕುವುದರ ಮೂಲಕ ಉದ್ಘಾಟಿಸಿದರು.
ಕಾರಟಗಿ ತಾಲೂಕು ಪಂಚಾಯತಿ ಅಧ್ಯಕ್ಷರು ಪ್ರಕಾಶ ಭಾವಿ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಿಆರ್‌ಪಿಗಳು, ಶಾಲೆಯ ಮುಖ್ಯ ಗುರುಗಳು ಮತ್ತು ಶಿಕ್ಷಕರು, ಎಎನ್‌ಎಂಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಎನ್‌ಆರ್‌ಎಮ್‌ಎಲ್ ಗುಂಪುಗಳ ಸದಸ್ಯರು ಹಾಗೂ ಹಾಸ್ಟೆಲ್ ವಾರ್ಡನ್‌ಗಳು ಭಾಗವಹಿಸಿದ್ದರು.
ನಂತರ ಮನೆಗೆ ಮನೆಗೆ ತೆರಳಿ ಹಳೆಯ ಉತ್ತಮ ಪುಸ್ತಕಗಳನ್ನು ನಾಗರೀಕರಿಂದ 350 ಹೆಚ್ಚು ಪುಸ್ತಕಗಳನ್ನು ಪುಸ್ತಕ ಜೋಳಿಗೆಯಲ್ಲಿ ಪಡೆಯಲಾಯಿತು. ನಾಗರೀಕರು ಉತ್ತಮ ಪುಸ್ತಕಗಳನ್ನು ಪುಸ್ತಕ ಜೋಳಿಗೆಗೆ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos