ದೇವರಿಗೂ ಬಂತಾ ಕೊರೋನಾ ವೈರಸ್

ದೇವರಿಗೂ ಬಂತಾ ಕೊರೋನಾ ವೈರಸ್

ವಾರಣಾಸಿ, ಮಾ. 10: ವಿಶ್ವದಾದ್ಯಂತ ಜನರಲ್ಲಿ ದಿನ ದಿಂದ ದಿನಕ್ಕೆ ಭಯ ಹುಟ್ಟಿಸುತ್ತಿರುವ ಕೊರೋನಾ ವೈರಸ್ ಅತಿ ವೇಗವಾಗಿ ಜನರಲ್ಲಿ ಹರಡುತ್ತಿದೆ. ವೈರಸ್ ಪರಿಣಾಮದಿಂದ ಜನರು ಮುಖಕ್ಕೆ ಮಾಸ್ಕ್ ಅನ್ನು ಹಾಕಿಕೊಂಡು ಓಡಾಡುವುದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಆದರೆ ದೇವಸ್ಥಾನದಲ್ಲಿ ಒಬ್ಬರು ದೇವರಿಗೆ ಮಾಸ್ಕ್ ಹಾಕಿರುವುದು ಕಂಡುಬಂದಿದೆ.

ಹೌದು, ವಿಶ್ವಾದ್ಯಂತ ಕ್ಷಿಪ್ರ ವೇಗದಲ್ಲಿ ಹಾರಡುತ್ತಿರುವ ಮಾರಣಾಂತಿಕ ಕೊರೋನಾ ವೈರಸ್ ಎಲ್ಲರಲ್ಲೂ ಆತಂಕ ಮೂಡಿಸಿದೆ. ಮುಂಜಾಗ್ರತಾ ಕ್ರಮವಾಗಿ ಜನರು ಮಾಸ್ಕ್ ಧರಿಸಿ ತಿರುಗಾಡುವುದು ಇದೀಗ ಸಮಾನ್ಯ. ಆದರೀಗ ಕೊರೋನಾ ಎಫೆಕ್ಟ್ ದೇವರಿಗೂ ತಟ್ಟಿದೆ.

ಹೌದು, ಭಾರತದ ಸಾಂಸ್ಕೃತಿಕ ನಗರಿ ವಾರಣಾಸಿಯಲ್ಲಿ ದೇವಾಲಯದ ಅರ್ಚಕರು ದೇವರ ವಿಗ್ರಹಕ್ಕೂ ಮಾಸ್ಕ್ ಧರಿಸಿ ಪೂಜೆ ಮಾಡುತ್ತಿದ್ದಾರೆ. ಜೊತೆಗೆ ದೇವರ ವಿಗ್ರಹ ಮುಟ್ಟದಂತೆ ಭಕ್ತರಿಗೆ ಮನವಿ ಮಾಡಿದ್ದಾರೆ.

ಕೊರೋನಾ ವೈರಸ್ ದೇಶಾದ್ಯಂತ ಹರಡುತ್ತಿದೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ನಾವು ವಿಶ್ವನಾಥ ದೇವರಿಗೆ ಮಾಸ್ಕ್ ಹಾಕಿದ್ದೇವೆ ಎಂದು ದೇವಾಲಯದ ಅರ್ಚಕ ಕೃಷ್ಣ ಆನಂದ ಪಾಂಡೆ ತಿಳಿಸಿದ್ಧಾರೆ. ಅಷ್ಟೇ ಅಲ್ಲದೇ, ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಭಕ್ತರು ದೇವರ ವಿಗ್ರಹಗಳನ್ನು ಮುಟ್ಟದಂತೆ ಮನವಿ ಮಾಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos