ಫೆ. 29: ಜಗತ್ತಿನಲ್ಲಿನ ನಾ ಮೇಲು ನೀ ಕೀಳು ಅಂತ ಇನ್ನೂ ಹಿಂದೂ-ಮುಸ್ಲಿಂಗಳ ನಡುವೆ ಗಲಾಟೆ ನಡೆಯುತ್ತಲೇ ಇದೆ ಇಂಥ ಗಲಾಟೆಗಳ ಮಧ್ಯೆಯೂ ಹಿಂದೂ-ಮುಸ್ಲಿಂಗಳು ಕೆಲವು ನಗರಗಳಲ್ಲಿ ಒಂದಾಗಿ ಬದುಕುತ್ತಿದ್ದಾರೆ.
ಹೌದು, ಜಗತ್ತು ಕಂಡ ರಕ್ತಸಿಕ್ತ ಇತಿಹಾಸದಲ್ಲಿ ಕೋಮು ವೈಷಮ್ಯದ ಅಧ್ಯಾಯ ಬಲು ದೊಡ್ಡದು. ಇಂಥದ್ದರಲ್ಲಿ, ಕೋಮು ಸಾಮರಸ್ಯದ ಸಂದೇಶ ಸಾರುವ ಸಾಕಷ್ಟು ನಿದರ್ಶನಗಳು ದೇಶದಲ್ಲಿ ಘಟಿಸುತ್ತಿದ್ದು, ಇವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವರದಿ ಮಾಡುವ ಮೂಲಕ ಸೌಹಾರ್ದತೆಯ ಸ್ಪೂರ್ತಿ ಸಾರುವ ಪೋಸ್ಟ್ಗಳು ಆಗಾಗ ಕಾಣಿಸಿಕೊಳ್ಳುತ್ತಿವೆ.
ಇದೇ ಸ್ಪೂರ್ತಿಯಲ್ಲಿ, ಮೀರತ್ನ ಮುಸ್ಲಿಂ ವ್ಯಕ್ತಿಯೊಬ್ಬರು ತನ್ನ ಮಗಳ ಮದುವೆಯ ಕರೆಯೋಲೆಯಲ್ಲಿ ಹಿಂದೂ ದೇವತೆಗಳಾದ ಗಣೇಶ ಹಾಗೂ ರಾಧಾ ಕೃಷ್ಣರ ಚಿತ್ರಗಳನ್ನು ಹಾಕಿಸಿದ್ದಾರೆ.
ಮದುವೆಯ ಆಮಂತ್ರಣವನ್ನು ಹಿಂದಿ ಹಾಗೂ ಉರ್ದು 2 ಭಾಷೆಯಲ್ಲಿ ಬರೆಯಿಸುವ ಮೂಲಕ ಹಿಂದೂ – ಮುಸ್ಲಿಂ ಭಾಯೀ ಭಾಯೀ ಸಂದೇಶವನ್ನು ರವಾನೆ ಮಾಡಿದ್ದಾರೆ ಹಸ್ತಿನಾಪುರದ ಈ ವ್ಯಕ್ತಿ.