ಬೆಂಗಳೂರು, ಆ.08: ಹೊಸಕೋಟೆ ತಾಲ್ಲೂಕು ಜಡಿಗೇನಹಳ್ಳಿ ಹೋಬಳಿಯ ಜಡಿಗೇನಹಳ್ಳಿ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆಯನ್ನು ಇಂದು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಹೊಸಕೋಟೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ವಿ.ಸಿ ಜಯದೇವಯ್ಯ ಹಾಜರಿದ್ದು ಸೈಕಲ್ ವಿತರಿಸಿದರು. ತಮ್ಮ ವೈಯಕ್ತಿವಾಗಿ ಶಾಲಾಭಿವೃದ್ಧಿ ಸಮಿತಿಗೆ ಅಭಿವೃದ್ಧಿಗಾಗಿ 12 ಸಾವಿರ ರೂಗಳನ್ನು ನೀಡಿದರು. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆಯಾದ ಧನಲಕ್ಷ್ಮೀ ಆಂಜಿನಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯ ಡಿ.ಟಿ ವೆಂಕಟೇಶ್, ಗ್ರಾಮ ಪಂಚಾಯ್ತಿ ಸದಸ್ಯರಾದ ಜೆ.ಆರ್.ಡಿ ಪ್ರಕಾಶ್, ಮುನಿರಾಜ್, ಕಾಂತಮ್ಮ, ರತ್ನಮ್ಮ ಲಕ್ಷ್ಮಪ್ಷöರಮಣ್, ಗ್ರಾಮದ ಮಂಜುನಾಥ್, ಮುಖ್ಯ ಶಿಕ್ಷಕಿ ಸುನಿತಾ, ಸಹಶಿಕ್ಷಕರು, ಮತ್ತು ಗ್ರಾಮಸ್ಥರು, ಹಾಜರಿದ್ದರು.