ಕಾರಟಗಿ: ಸಮೀಪ ಚಳ್ಳೂರು ಗ್ರಾಮದಲ್ಲಿ ವೀರ, ಸಿಂಹಸ್ವಪ್ನ, ಕೆಚ್ಚದೆಯ ವೀರಮದಕರಿ ನಾಯಕ ಜಯಂತಿಯನ್ನು ನಾಯಕ ಸಮುದಾಯದ ವತಿಯಿಂದ ಗ್ರಾಮದ ವಾಲ್ಮೀಕಿ ವೃತ್ತದಲ್ಲಿ ಆಚರಿಸಲಾಯಿತು.
ವೀರ ಮದಕರಿ ನಾಯಕ ಮತ್ತು ವಾಲ್ಮೀಕಿ ಮಹರ್ಷಿಗಳ ಭಾವಚಿತ್ರ ಪೂಜೆ ಸಲ್ಲಿಸಿ ಜೈಕಾರ ಕೂಗಿದರು.
ಗ್ರಾಮದ ನಾಯಕ ಸಮಾಜದ ಹಿರಿಯ ಮುಖಂಡರಾದ ಶಿವಣ್ಣ ಹುಡೇದ್ ಮಾತನಾಡಿ, ನಮ್ಮ ಸಮಾಜದ ಹೆಮ್ಮೆಯ ನಾಯಕರಾದ ವೀರ ಮದಕರಿ ನಾಯಕರ ಜಯಂತಿಯನ್ನು ನಮ್ಮ ಗ್ರಾಮದ ಯುವಕರು ಅದ್ದೂರಿಯಾಗಿ ಆಚರಣೆ ಮಾಡುತ್ತಾ ಬಂದಿದ್ದಾರೆ, ಅಲ್ಲದೇ ಅಂತಹ ಮಹಾನ್ ವೀರ ನಾಯಕ ಅಧಿಕಾರ, ಗತ್ತು, ಸಾಮ್ರಾಜ್ಯದ ರಕ್ಷಣೆಯ ತಂತ್ರಗಳಂತಹ ಅನೇಕ ಜ್ಞಾನವನ್ನು ನಮ್ಮ ಯುವ ಜನತೆ ಬೆಳೆಸಿಕೊಳ್ಳಬೇಕು, ಅವರಂತೆ ಮಹಾನ್ ನಾಯಕರಾಗಿ ಸಮಾಜದ ಹೆಸರು ಮತ್ತು ಗೌರವವನ್ನು ಹೆಚ್ಚಿಸಬೇಕು ಎಂದರು.
ಯುವ ನಾಯಕ ಲಿಂಗೇಶ ಕಲ್ಗುಡಿ ಮಾತನಾಡಿ, ಶ್ರೀ ಮಹರ್ಷಿ ವಾಲ್ಮೀಕಿ, ವೀರ ಮದಕರಿ ನಾಯಕ, ಗಂಡುಗಲಿ ಕುಮಾರರಾಮ ನಂತ ಅನೇಕ ಮಹಾನ್ ವ್ಯಕ್ತಿಗಳು ನಮ್ಮ ಸಮಾಜದವರಾಗಿದ್ದು ಹೆಮ್ಮೆ ಸಂಗತಿ. ಅಂತಹವರ ಆದರ್ಶದಲ್ಲಿ ನಮ್ಮ ನಾಯಕ ಸಮುದಾಯದ ಯುವಕರು ಮುಂದುವರೆಯಬೇಕಿದೆ ಎಂದು ಹೇಳಿದರು.