ದುರ್ಗಾ ಗುಡಿ ಜೀರ್ಣೋದ್ಧಾರ ಆರಂಭ

  • In State
  • August 5, 2021
  • 151 Views
ದುರ್ಗಾ ಗುಡಿ ಜೀರ್ಣೋದ್ಧಾರ ಆರಂಭ

ಹಾನಗಲ್: ನೀರಲಗಿ ಗ್ರಾಮದ ದುರ್ಗಾದೇವಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಬುಧವಾರ ಭೂಮಿಪೂಜೆ ನೆರವೇರಿಸಿದ್ದರು. ಆನಂತರ ವರದಿಗಾರರೊಂದಿಗೆ ಮಾತನಾಡಿದರು. ಇದಕ್ಕಾಗಿ ತಮ್ಮ ಪ್ರದೇಶಾಭಿವೃದ್ಧಿಗೆ ನಿಧಿಯಿಂದ 3 ಲಕ್ಷ ರೂ ಮಂಜೂರುಮಾಡಲಾಗಿದೆ ಎಂದರು. “ದೇವಸ್ಥಾನ, ಮಠ, ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರಕ್ಕೆ ವಿಶೇಷ ಆದ್ಯತೆ ನೀಡಿ, ಅನುದಾನದಡಿ ಹೆಚ್ಚು ಸಹಾಯ ಒದಗಿಸುತ್ತೇನೆ. ಸಮುದಾಯವೂ ಈ ನಿಟ್ಟಿನಲ್ಲಿ ಕೈ ಜೋಡಿಸಿದರೆ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿ ನಡೆಯಲಿದೆ ” ಎಂದು ಹಾರೈಸಿದರು. ಎಂ.ಎಫ್.ಚಿಕ್ಕಮಠ, ಬಸವರಾಜ್ ಹೊಸಮನಿ, ಸುರೇಶ್, ಶಂಭುಲಿಂಗ ಹುಲಿಕಟ್ಟಿ, ಚಂದ್ರು, ದೇವಿಂದ್ರ ತಳವಾರ, ಈಶ್ವರ ಚೌಟಿ, ಚಂದ್ರು ದೇವಗಿರಿ, ಶಂಭುಲಿಂಗ ಚಲ್ಲಾಳ, ಚಂದ್ರಪ್ಪ ಜೈನರ, ರಮೇಶ್ ದೊಡ್ಡವಾಡ, ರಾಜೇಸಾಬ ಹುಲಿಕಟ್ಟಿ ಇನ್ನಿತರರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos