ಹುಬ್ಬಳ್ಳಿ, ಜ. 22: ಜೀವ ಅಮೋಲ್ಯವಾಗಿದ್ದು ಸಂಚಾರ ನಿಯಮಗಳನ್ನು ಪಾಲಿಸಿಕೊಂಡು ಅಮೋಲ್ಯವಾದ ಜೀವನ ಉಳಿಸಿಕೊಳ್ಳಲು ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲ್ವತ್ವಾಡಮಠ ಕಿವಿ ಮಾತು ಹೇಳಿದರು.
ಧಾರವಾಡ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಜಿಲ್ಲಾ ಆಡಳಿತ, ಸಾರಿಗೆ, ಪೋಲಿಸ್, ವಾರ್ತಾ ಮತ್ತು ಪ್ರಚಾರ ಇಲಾಖೆ ಸಮಿತಿಯ ಪಾಲುದಾರರ ಇಲಾಖೆಗಳು ಹಾಗೂ ಹು-ಧಾ ಮೋಟಾರು ವಾಹನ ತರಭೇತಿ ಶಾಲೆಗಳ ಸಹಯೋಗದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ದಲ್ಲಿ ಆಯೋಜಿಸಲಾಗಿದ್ದ 31 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೆ ನೀಡಲು ನೀಡಬಾರದು ಇಂದು ಮೋಟಾರು ವಾಹನ ನಿಯಮಗಳು ಅಮೋಲಾಗ್ರ ಬದಲಾವಣೆಯಾಗುತಿದ್ದು, ಅವುಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಇನ್ನೊಬ್ಬರಿಗೆ ಸಹ ತಿಳಿ ಹೇಳಲು ಹೇಳಿದರು. ಇದಕ್ಕೂ ಮುನ್ನ ರಸ್ತೆ ಸುರಕ್ಷತೆ ಜಾಗೃತಿ ಮೋಟಾರ ರಾಲಿ ಇಲ್ಲಿನ ಚೆನ್ನಮ್ಮ ವೃತ್ತದಿಂದ ಬಿ.ವಿ.ಬಿ ಇಂಜಿನಿಯರಿಂಗ್ ಕಾಲೇಜ್, ಚೇತನಾ ಕಾಲೇಜ್ ಮುಖಾಂತರ ಮರಳಿ ಚೆನ್ನಮ್ಮ ವೃತ್ತದವರೆಗೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಹು-ಧಾ ಸಹಾಯಕ ಪೊಲೀಸ್ ಆಯುಕ್ತ (ಸಂಚಾರ) ಎಸ್.ಎಂ.ಸಂಗೀಗವಾಡ, ಧಾರವಾಡ ಪ್ರಾದೇಶಿಕ ಸಾರಿಗೆ ಅಧಿಕಾರಿ ಪಶ್ಚಿಮ ಸಿ.ಡಿ.ನಾಯಕ, ಅತಿಥಿಗಳಾಗಿ ಮೋಟಾರು ವಾಹನ ನಿರೀಕ್ಷಿಕ ಪಿ.ಆರ್.ದೇಸಾಯಿ, ಮೋಟಾರು ವಾಹನ ನಿರೀಕ್ಷಿಕ ಅರುಣ ಕಟ್ಟಿಮನಿ, ಮೊಟಾರು ಡ್ರವಿಂಗ್ ಶಾಲೆಯ ಮುಖಂಡರಾದ ಪುಷ್ಪಾ ಅರಳಿಕಟ್ಟಿ ಮುಂತಾದವರು ಆಗಮಿಸಿದ್ದರು. ನಂತರ ಸಂಚಾರ ನಿಯಮ ಪಾಲನೆ ಕುರಿತಂತೆ ನಿಧಾನವೇ ಪ್ರದಾನ ನಾಟಕ ಪ್ರಸ್ತುತಪಡಿಸಿದರು.