ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ

ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ

ಕಲಬುರಗಿ, ಪೆ. 28: ಮುಖ್ಯಮಂತ್ರಿಗಳಾದ ಶ್ರೀ‌ ಬಿ.ಎಸ್‌.ಯಡಿಯೂರಪ್ಪ ಅವರ ಹಾಗೂ ದಕ್ಷಿಣ ಮತಕ್ಷೇತ್ರದ ಶಾಸಕ ಶ್ರೀ ದತ್ತಾತ್ತೇಯ ಸಿ. ಪಾಟೀಲ ರೇವೂರ ಅವರ ಜನ್ಮ ದಿನಾಚರಣೆ ಅಂಗವಾಗಿ ಕಲಬುರಗಿಯಲ್ಲಿ ಇಂದು  ಏರ್ಪಡಿಸಿದ್ದ ಸಂಭ್ರಮಾಚರಣೆ ಹಾಗೂ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಇದೊಂದು ಅರ್ಥಪೂರ್ಣ ವಾದ ಕಾರ್ಯಕ್ರಮವಾಗಿದೆ. ಶ್ರೀ ಯಡಿಯೂರಪ್ಪ ಅವರ ರೈತರು, ದೀನ ದಲಿತರ ಏಳಿಗಾಗಿ ಅಪಾರವಾಗಿ ಶ್ರಮಿಸುತ್ತಿದ್ದಾರೆ. ದತ್ತಾತ್ರೇಯ ಪಾಟೀಲರು ಉದಯೋನ್ಮುಖ ಪ್ತಭಾವಿ ನಾಯಕರಾಗಿ ಬೆಳೆಯಲಿ‌ ಎಂದು‌ ಹಾರೈಸಿದರು.‌

ರಾಜ್ಯ ಸರ್ಕಾರವು ಎಲ್ಲಾ ಜಿಲ್ಲೆಗಳಲ್ಲಿ ಉದ್ಯೋಗ ಮೇಳಗಳನ್ನು‌ ಏರ್ಪಡಿಸಿ, ಉದ್ಯೋಗಾವಕಾಶ ನೀಡುತ್ತಿದೆ. ಈ ಉದ್ಯೋಗ ಮೇಳದಲ್ಲಿ 150 ಕಂಪನಿಗಳು ಉದ್ಯೋಗ ನೀಡಲು ಭಾಗವಹಿಸಿವೆ. 8 ಸಾವಿರ ಉದ್ಯೋಗಗಳನ್ನು ನೀಡಲಿವೆ. 16ಸಾವಿರ ಅಭ್ಯರ್ಥಿಗಳು ನೊಂದಣಿ ಮಾಡಿಸಿದ್ದಾರೆ. ಉದ್ಯೋಗ ಮೇಳಗಳಲ್ಲಿ ಹೆಚ್ವು ಅಭ್ಯರ್ಥಿಗಳು ಭಾಗವಹಿಸಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಮಾರಂಭದಲ್ಲಿ ಗೃಹ ಸಚಿವರಾದ ಶ್ರೀ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವರಾದ ಶ್ರೀ ಆರ್. ಅಶೋಕ್, ವಿವಿಧ ಶಾಸಕರು, ಅಧಿಕಾರಿಗಳು, ಶ್ರೀ ದತ್ತಾತ್ರೇಯ ಪಾಟೀಲ ಅವರಿಗೆ  ಶುಭಕೋರಿದರು. ವಿವಿಧ ಸ್ವಾಮಿಗಳು ಸಾನಿಧ್ಯವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos